Breaking News
ಕನಕಗಿರಿ ಕ್ಷೇತ್ರದ ಬಿಸಿಎಂ‌ ಹಾಸ್ಟೆಲ್ ವಿದ್ಯಾರ್ಥಿಗಳ ಎಸ್ಸೆಸೆಲ್ಸಿ ಪರೀಕ್ಷೆಯ ಸಾಧಕರಿಗೆ ಸಚಿವ ಶಿವರಾಜ ತಂಗಡಗಿ ಸನ್ಮಾನ.

 

 

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಕನಕಗಿರಿ ಕ್ಷೇತ್ರದ ಬಿಸಿಎಂ ಇಲಾಖೆ ವ್ಯಾಪ್ತಿಯಲ್ಲಿರುವ ಹಾಸ್ಟೆಲ್ ಗಳ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಇಡೀ ಕ್ಷೇತ್ರದ ಜನತೆಗೆ ಕೀರ್ತಿ ತಂದಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಮುಂಬರುವ ದಿನಗಳಲ್ಲಿ ಅತ್ಯುನ್ನತ ಹುದ್ದೆಗೆ ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರು ಕಾರಟಗಿಯ ತಮ್ಮ ನಿವಾಸದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಬಿ ಸಿ ಎಂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.

ಕನಕಗಿರಿ ವಿಧಾನಸಭಾ ಕ್ಷೇತ್ರದ, ಬಿಸಿಎಂ ಇಲಾಖೆಯ ವಸತಿ ಶಾಲೆಯ ಮಕ್ಕಳು ಉನ್ನತ ಸಾಧನೆ ಮಾಡಿರುವುದು ಹಾಗೂ ಉತ್ತಮ ಸಾಧನೆ ಮಾಡುವ ಮೂಲಕ ಕ್ಷೇತ್ರಕ್ಕೆ ಹಾಗೂ ನನ್ನ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆ ಯ ವಿಷಯ ಎಂದರು. ಜತೆಗೆ ಮುಂದಿನ ನಿಮ್ಮ ಶೈಕ್ಷಣಿಕ ಜೀವನ ಉತ್ತಮವಾಗಿರಲಿ ಉನ್ನತ ಸರಕಾರಿ ಹುದ್ದೆಯಲ್ಲಿ ಕೆಲಸ ಮಾಡುವ ಗುರಿಯನ್ನು ಇಟ್ಟುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಲಿಂಗರಾಜ ತಂದೆ ಶಿವಶಂಕರಪ್ಪ 625 ಕ್ಕೆ 621, (99.63% )ರಾಜ್ಯಕ್ಕೆ 5ನೇ ಸ್ಥಾನ ಪಡೆದಿರುತ್ತಾರೆ. ಪ್ರತಿಭಾ ತಂದೆ ಬಸವರಾಜ 625ಕ್ಕೆ 619,( 99.04)ರಾಜ್ಯಕ್ಕೆ 7ನೇ ಸ್ಥಾನ, ನಂದಿನಿ ತಂದೆ ವೀರೇಶ 625 ಕ್ಕೆ 617 (98.72%) 9ನೇ ಸ್ಥಾನ ಪಡೆದಿರುತ್ತಾರೆ.

ಈ ವೇಳೆ ಪ್ರಾಂಶುಪಾಲರು ಸಿದ್ದಲಿಂಗಪ್ಪ ಉಪನ್ಯಾಸಕರಾದ ವಂದನಾ ಮಲ್ಲಿಕಾರ್ಜುನ, ಶ್ಯಾಮಣ್ಣ ಗುರಿಕಾರ, ವಿರೇಶ ತೆಗ್ಗಿ ಹಳ್ಳಿ, ಸುರೇಶ್ ಹಿರೇಮಠ, ವಿಶ್ವಾನಾಥ ಹಳೆಮನಿ, ಮುದುಕಪ್ಪ ಸೇರಿ ವಿದ್ಯಾರ್ಥಿಗಳು ಇದ್ದರು.