ನೂತನ ತಹಸೀಲ್ದಾರ್ ಯು.ವಸಂತಕುಮಾರಿ ಕರ್ತವ್ಯಕ್ಕೆ ಹಾಜರು.
*ನೂತನ ತಹಸೀಲ್ದಾರರಿಗೆ ಅಧಿಕಾರ ಪ್ರಭಾರ ವಹಿಸಿದ ಕನಕಗಿರಿ ತಹಸೀಲ್ದಾರ್ ವಿಶ್ವನಾಥ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಗಂಗಾವತಿಯ ನೂತನ ತಹಶೀಲ್ದಾರ್ ಆಗಿ ಯು ವಸಂತಕುಮಾರ್ ಅವರು ಬುಧವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯು.ವಸಂತ ಕುಮಾರಿ ಅವರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಶಿಫಾರಸಿನ ಮೇರೆಗೆ ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯು.ವಸಂತಕುಮಾರಿ ಅವರನ್ನು ಗಂಗಾವತಿಗೆ ವರ್ಗಾವಣೆ ಮಾಡುವಂತೆ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದರು. ಕಳೆದ ವಾರ ಗಂಗಾವತಿಯ ತಹಶೀಲ್ದಾರರಾಗಿ ವರ್ಗಾವಣೆಗೊಂಡಿದ್ದ ಯು.ವಸಂತಕುಮಾರಿ ಕಾರಣಾಂತರಗಳಿಂದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಬುಧವಾರ ಸಂಜೆ ಗಂಗಾವತಿಗೆ ಆಗಮಿಸಿ ತಹಸಿಲ್ ಕಚೇರಿಯಲ್ಲಿ ಪ್ರಭಾರವನ್ನು ವಹಿಸಿಕೊಂಡರು. ಕನಕಗಿರಿಯ ತಹಸಿಲ್ದಾರ್ ವಿಶ್ವನಾಥ್ ಗುಡಿ ಅವರು ನೂತನ ತಹಸಿದ್ದಾರವರಿಗೆ ಪುಷ್ಪಗುಚ್ಛಾವನ್ನು ನೀಡಿ ಪ್ರಭಾರವನ್ನು ವಹಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸಲ್ದಾರ್ ಮಹಂತ ಗೌಡ ಪಾಟೀಲ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

