ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ನೀರಿನ ಅರವಟಿಗೆ ಆರಂಭ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ಗಂಗಾವತಿ ವಿರುಪಾಪೂರ ತಾಂಡದ ಸದ್ಗುರು ಸೇವಾಲಾಲ್ ಮಹಾರಾಜ ಸರ್ಕಲ್ ಬಳಿ
ಕರ್ನಾಟಕ ರತ್ನ ಡಾ.ವಿಷ್ಣುವರ್ಧನ ಅಭಿಮಾನಿಗಳು ಹಾಗೂ
ವಿರೂಪಾಪೂರತಾಂಡ
ವತಿಯಿಂದ
ಶುದ್ಧ ಕುಡಿಯುವ ನೀರಿನ ಅವರಟಿಗೆ ಸೇವೆ ಆರಂಭಿಸಲಾಯಿತು.
ಬಿರು ಬೇಸಿಗೆಯ
ಬಿಸಿಲು ತಾಪಮಾನ ಹೆಚ್ಚಾಗುತ್ತಿದ್ದು ವಿರುಪಾಪೂರ ತಾಂಡ ಹಾಗೂ ನಗರದ ಅತಿ ಹೆಚ್ಚು ಜನರು ಕೂಲಿ ಕಾರ್ಮಿಕರು ಹಿರಿಯರು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಕೊಡುವ ಉದ್ದೇಶದಿಂದ ನೀರಿನ ಅರವಟಿಗೆ ಆರಂಭಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿರುಪಾಪೂರತಾಂಡದ
ವಿಷ್ಣುಸೇನ ಸಮಿತಿ,ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ
ಮಲ್ಲೆಪ್ಪ ಕುನ್ನಾ( ಕದಂಬ),
ಅಧ್ಯಕ್ಷ ಹನುಮಂತ ಜಾದವ್,ಉಪಾಧ್ಯಕ್ಷ
ಪಾಂಡು ನಾಯ್ಕ್ (ಬಟಣಿ),
ಪ್ರಧಾನ ಕಾರ್ಯದರ್ಶಿ
ರಾಜಾ ನಾಯಕ್,ಸಹಕಾರ್ಯದರ್ಶಿ
ಬಾಬು ನಾಯ್ಕ್ , ಸಂಘಟನಾ ಕಾರ್ಯದರ್ಶಿ
ರವಿಕುಮಾರ್ ಖಜಾಂಚಿ ಶಿವಪ್ಪ ,ವೆಂಕಟೇಶ್ ಗೋಬಿ ಹಾಗೂ
ಸಂಘದ ಕಾರ್ಯಕರಣಿ ಸದಸ್ಯರು ಹನಮಂತ ಪೂಜಾರಿ,ಪರಶುರಾಮ್,ಸೋಮ,ಅಶೋಕ ಹಸನಾ,ಚಂದ್ರ ನಾಯ್ಕ, ಕಿರಣಕುಮಾರ್,ರಾಮ ಮುನಿ,ರವಿಚಂದ್ರ ಚವ್ಹಾಣ ಸೇರಿದಂತೆ ಅನೇಕರಿದ್ದರು.

