ಗಂಗಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ವಾಕ್ ಇನ್ ಇಂಟರ್ವ್ಯೂ.
ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ:ನರ್ಸರಿಯಿಂದ ನೌಕರಿಯವರೆಗೆ ಎಂಬ ದೃಢಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ವಿದ್ಯಾನಿಕೇತನ ವಿದ್ಯಾಸಂಸ್ಥೆಯು ಈ ಭಾಗದ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸುವ ಯೋಜನೆ ಮತ್ತು ಯೋಚನೆಗಳನ್ನು ಹೊಂದಿದ್ದು, ಈ ದಿಶೆಯಲ್ಲಿ ಗಂಗಾವತಿಯಲ್ಲಿ ಮೊಟ್ಟ ಮೊದಲನೇ ಬಾರಿಗೆ ದೇಶದ ಹೆಸರಾಂತ ಸಾಫ್ಟ್ವೇರ್ ಕಂಪನಿಯಾದ ಟಿಸಿಎಸ್
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನವರು
ಶ್ರೀ ವಿದ್ಯಾನಿಕೇತನ ಪದವಿ ಮಹಾವಿದ್ಯಾಲಯ ಹಾಗೂ ದೇಶಪಾಂಡೆ ಕೌಶಲ್ಯಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಮೇ05 ರಂದು ಗಂಗಾವತಿ ತಾಲೂಕಿನ ವಡ್ಡರಟ್ಟಿಯ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಈ ಭಾಗದ ತಾಂತ್ರಿಕೇತರ ಪದವೀಧರರಿಗೆ (BBA, B.COM, BA, BFSI, BHM, BSW, BBM) ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಸಂದರ್ಶನವನ್ನು ನಡೆಸುತ್ತಿದ್ದು, ನಮ್ಮ ಭಾಗದ ಪ್ರತಿಭಾವಂತ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸಲು ಈ ನೇರ ಸಂದರ್ಶನವು ಅತ್ಯಂತ ಸಹಕಾರಿಯಾಗಲಿದ್ದು,
ಈ ಭಾಗದ ಅರ್ಹ ಪದವೀಧರರು ಈ ನೇರ ಸಂದರ್ಶನದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿದ್ಯಾನಿಕೇತನ ವಿದ್ಯಾಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮನವಿ ಮಾಡಿದ್ದಾರೆ.

