Breaking News
ವಿದೇಶಿ ಮಹಿಳೆ ಅತ್ಯಾಚಾರ ಹಾಗೂ ಒರ್ವನ ಕೊಲೆ ಸೇರಿ ಪ್ರಮುಖ ಕೇಸ್‌ಗಳ ತೀರ್ಪು ನೀಡಿದ್ದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ವರ್ಗಾ.

*ಪರಿಸರ, ಪ್ಲಾಸ್ಟಿಕ್ ಬಳಕೆ ಬಗ್ಗೆ ಕಡಕ್ ಕಾರ್ಯಾಚರಣೆ ಮೂಲಕ ಜನತೆಗೆ ಜಾಗೃತಿ ಮೂಡಿಸಿದ್ದರು.

*ಐತಿಹಾಸಿಕ ಆನೆಗೊಂದಿಯಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ

 *ಲೋಕ್ ಆದಾಲತ್ ಕಾರ್ಯಕ್ರಮಗಳ ಮೂಲಕ ಸಾವಿರಾರು ಕೇಸ್‌ಗಳ ಇತ್ಯಾರ್ಥ

 *ಮೂರು ವರ್ಷಗಳ ನಂತರ ನ್ಯಾಯಾಧೀಶರ ವರ್ಗಾ.

*ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ವೇದಮೂರ್ತಿ ಬಿ.ಎಸ್ ವರ್ಗಾ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಒಂದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸದಾನಂದ ನಾಗಪ್ಪ ನಾಯ್ಕ ಇವರನ್ನು ಐದನೇಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಕ್ಷಿಣ ಕನ್ನಡ ಮಂಗಳೂರು ಪೀಠ ಪುತ್ತೂರು ನ್ಯಾಯಾಧೀಶರನ್ನಾಗಿ ಹಾಗೂ ಗಂಗಾವತಿಯ ಒಂದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ವೇದಮೂರ್ತಿ ಬಿ.ಎಸ್ ಇವರನ್ನು ಹೈಕೋರ್ಟ್ ರಿಜಿಸ್ಟರ್ ಜನರಲ್ ಕೆ.ಎಸ್,ಭರತಕುಮಾರ  ಅವರು ಗುರುವಾರ  ವರ್ಗಾವಣೆ ಆದೇಶ ಮಾಡಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ತಾಲೂಕಿನ ಸಾಣಾಪೂರ ಕೆರೆ ದಂಡೆಯ ಮೇಲೆ ದುಷ್ಕರ್ಮಿಗಳಿಂದ ವಿದೇಶ ಮಹಿಳೆಯ ಅತ್ಯಾಚಾರ ಮತ್ತು ಒರ್ವನ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಮರಣದಂಡನೆ ತೀರ್ಪು ಸೇರಿದಂತೆ ಹಲವು ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿದ್ದ ನ್ಯಾಯಾಧೀಶ ಸದಾನಂದ ನಾಯ್ಕ ಅವರು ಜನಪರವಾಗಿ ತಾಲೂಕು ಕಾನೂನು ಸೇವಾ ಸಮಿತಿ ಮೂಲಕ ತಾಲೂಕಿನ ಐತಿಹಾಸಿಕ ಆನೆಗೊಂದಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಸ್ಮಾರಕಗಳ ಸ್ವಚ್ಛತೆ, ಆಗಮಿಸುವ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸರಿಪಡಿಸಲು ಆನೆಗೊಂದಿಯಲ್ಲಿ ದತ್ತು ಪಡೆದು ಕಾರ್ಯ ಮಾಡಿದ್ದರು. ಜತೆಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಆನೆಗೊಂದಿ  ಗ್ರಾಮ ಬಂದರೂ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಪ್ರಾಧಿಕಾರದ ಅಧಿಕಾರಗಳು,ಪಿಡಿಓ  ಸೇರಿ  ಗ್ರಾಮಸ್ಥರ ಸಭೆ ನಡೆಸಿ ಐತಿಹಾಸಿಕ ಗ್ರಾಮ ಹಾಗೂ ಪ್ರವಾಸೋದ್ಯಮದ ಜಾಗೃತಿ ಮೂಡಿಸಿದ್ದರು.      ಪ್ರತಿ ತಿಂಗಳು ಆಯೋಜನೆಗೊಳ್ಳುವ ರಾಷ್ಟ್ರೀಯ ಲೋಕ್ ಆದಾಲತ್ ಕಾರ್ಯಕ್ರಮದಲ್ಲಿ ಸಾವಿರಾರು ರಾಜೀಯಾಗುವ ಪ್ರಕರಣಗಳನ್ನು ಇತ್ಯಾರ್ಥ ಮಾಡಿದ್ದರು. ಜತೆಗೆ ಹಲವು ಜೋಡಿ ಪತಿ ಪತ್ನಿಯರನ್ನು ಪುನಹ ಒಂದಾಗುವಂತೆ ಕೌನ್ಸಲಿಂಗ್ ನಡೆಸಿ ಕೌಟುಂಬಿಕ ಕಲಹ ನಿಲ್ಲುವಂತೆ ಮಾಡಿದ್ದರು. ಆರೋಗ್ಯ, ಪರಿಸರ, ಹಿರಿಯರನ್ನು ಗೌರವಿಸುವ ಹಾಗೂ  ಮಹಿಳಾ ಸಬಲೀಕರಣ, ಕಾರ್ಮಿಕ ಕಲ್ಯಾಣ, ಬಾಲಕಾರ್ಮಿಕ ನಿಷೇಧ ಕಾನೂನಿನ ನೆರವಿನ ಕುರಿತು ಜಾಗೃತಿಯನ್ನು ವಿಶೇಷ ಆಸಕ್ತಿಯಿಂದ ಮಾಡಿ ಜನಮಾನಸದಲ್ಲಿ ಉಳಿಸಿದ್ದರು.