Breaking News
ನಿರ್ಬಂಧ ಮಧ್ಯದಲ್ಲಿ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಬಂದ ಪುನೀತ್ ಕೆರೆಹಳ್ಳಿ, ಪೊಲೀಸರ‌ ಆಕ್ಷೇಪ ಉಲ್ಲಂಘಿಸಿ ಬೆಟ್ಟ ಹತ್ತಿರ ದೇವರ ದರ್ಶನ.

*ಮಾ.23 ರಂದು ಯಲಬುರ್ಗಾ ಹಿರೇವಂಕಲಕುಂಟಾದ ಹಿಂದು ಸಮಾವೇಶಕ್ಕೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ ಕೆರೆಹಳ್ಳಿ ಆಹ್ವಾನ ಹಿನ್ನೆಲೆಯಲ್ಲಿ ಇಬ್ಬರಿಗೂ ಜಿಲ್ಲಾಡಳಿತ ನಿರ್ಬಂಧ.

*ಮಾಹಿತಿ ತಿಳಿಯದೇ ಅಂಜನಾದ್ರಿ ಗೆ ಆಗಮಿಸಿದ ಪುನೀತ ಕೆರೆಹಳ್ಳಿ,ಪೊಲೀಸರೊಂದಿಗೆ ವಾಗ್ವಾದ.

*ಪಟ್ಟು ಬಿಡದೇ ಬೆಟ್ಟ ಹತ್ತಿದ ಕೆರೆಹಳ್ಳಿ ಫಾಲೋ ಮಾಡಿದ ಪೊಲೀಸರು.

*ಕೊನೆಗೂ ಪುನೀತ್ ಗೆ ನೋಟೀಸ್ ನೀಡಿ ಜಿಲ್ಲಾ ಗಡಿ ದಾಟಿಸಿದ ಪೊಲೀಸರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಗಂಗಾವತಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಪರ್ವತಕ್ಕೆ ದರ್ಶನಕ್ಕೆ ಆಗಮಿಸಿದ್ದ ಆರೆಸ್ಸೆಸ್ ಸಂಘ ಪರಿವಾರದ ಪುನೀತ್ ಕೆರೆಹಳ್ಳಿ ಅವರಿಗೆ ಕೊಪ್ಪಳ ಜಿಲ್ಲಾಡಳಿತ ನಿಷೇಧವಿದ್ದರೂ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ಬೆಳ್ಳಿಗ್ಗೆ ಜರುಗಿತು.

ನೋಟಿಸ್ ನೀಡದೇ ಅಂಜನಾದ್ರಿ ದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಪುನೀತ್ ಕೆರೆಹಳ್ಳಿ ಖಂಡಿಸಿ ಕಿಷ್ಕಿಂಧಾ ಅಂಜನಾದ್ರಿ ದರ್ಶನ ಪಡದೇ ಪಡೆಯುತ್ತೇನೆ ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿ ಎಂದು ಪೊಲೀಸರ ವಿರೋಧದ ಮಧ್ಯ ಬೆಟ್ಟ ಹತ್ತಿ ಶ್ರೀ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ದರ್ಶನದ ನಂತರ ಬೆಟ್ಟ ಇಳಿದ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರು ಜಿಲ್ಲಾ ಪ್ರವೇಶದ ನಿರ್ಬಂಧದ ನೋಟೀಸ್ ಅನ್ನ ನೀಡಿದರು ನಂತರ ಅವರನ್ನು ಕೊಪ್ಪಳ ಜಿಲ್ಲೆಯ ಗಡಿ ದಾಟಿಸಿ ಕಳುಹಿಸಿದರು.

ಮಾ.23 ರಂದು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದವರು ಆಯೋಜಿಸಿರುವ ಹಿಂದು ಸಮಾವೇಶದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗೋ ರಕ್ಷಣೆ ಹೋರಾಟ ಮಾಡುವ ಪುನೀತ್ ಕೆರೆಹಳ್ಳಿ ಮುಖ್ಯಭಾಷಣ ಮಾಡಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿ ಅವರಿಗೆ ಮಾ.21-23 ಸಂಜೆ ವರೆಗೆ

ಕೊಪ್ಪಳ ಜಿಲ್ಲಾ ಪ್ರವಾಸವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಡಾ.ಸುರೇಶ ಇಟ್ನಾಳ

ಆದೇಶ ಮಾಡಿದ್ದಾರೆ.

ಎಸ್ಸಿ ಒಳಮೀಸಲಾತಿ ನ್ಯಾ. ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿ ತಿರಸ್ಕಾರಕ್ಕೆ ದಲಿತ ಬಲಗೈ ಬಣ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ :ಎಸ್ಸಿ

ಒಳ ಮೀಸಲಾತಿ ಹಂಚಿಕೆಯ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಿರಸ್ಕರಿಸಿ ಮತ್ತೊಮ್ಮೆ ಮೀಸಲಾತಿ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯದ ಒಕ್ಕೂಟದ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿಯವರ ಆದೇಶದಂತೆ ಗಂಗಾವತಿಯ ಸರ್ಕಿಟ್ ಹೌಸ್ ನಲ್ಲಿ ದಲಿತ ಬಲಗೈ ಸಮುದಾಯದ ಸಂಘಟನೆಗಳ ನಾಯಕರೆಲ್ಲರರು ಒತ್ತಾಯಿಸಿದರು. ಈ ಸಂಬಂಧ ಮಾ. 25 ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆಗೆ

ತೆರಳು ಕುರಿತು ಚರ್ಚೆ ನಡೆಸಲಾಯಿತು.

ದಲಿತ ಸಮುದಾಯದ ಹಿರಿಯ ನಾಯಕ ಕುಂಟೋಜಿ ಮರಿಯಪ್ಪ ಮಾತನಾಡಿ,

ನಾವು ಮೀಸಲಾತಿಯ ವಿರೋಧಿಗಳು ಅಲ್ಲಾ. ಆದರೆ ರೋಸ್ಟರ್ ಪದ್ಧತಿಯಲ್ಲಿ ಸಮನಾಗಿ ಹಂಚಿಕೆ ಮಾಡದೆ ಬಿಂದುಗಳಲ್ಲಿ ಏರುಪೇರು ಮಾಡಿದ್ದು ಇವುಗಳನ್ನು ಸರಿಪಡಿಯುವಕರಿದ್ದ.ಇಲ್ಲವಾದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ಸಾದ್ಯತೆ ಇದ್ದು ಕೂಡಲೇ ಸರಿಪಡಿಸಬೇಕು.

ನ್ಯಾಯಬದ್ಧ ಹೋರಾಟಕ್ಕೆ ಕೊಪ್ಪಳದ ವಿವಿಧ ತಾಲೂಕಿನ ದಲಿತ ಮುಖಂಡರು, ಸಂಘಟನೆಗಾರರು, ಮಹಿಳೆಯರು,ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಲಕ್ಷಾಂತರ ಜನ ಸೇರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಬೇಕು ಮತ್ತು ಈ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.

ಸಮುದಾಯದ ಹಿರಿಯ

ಸಭೆಯಲ್ಲಿ ದಲಿತ ಬಲಗೈ ಸಮುದಾಯದ ಮುಖಂಡರಾದ ದೊಡ್ಡ ಬೋಜಪ್ಪ, ಸೋಮಶೇಖರ್ ಬಣ್ಣದಮನೆ,

ಜಿ.ಹುಲಗಪ್ಪ ಮಾಸ್ತರ, ಮಾಗಿ ಹುಲಗಪ್ಪ, ಅಂಬಣ್ಣ ಛಲವಾದಿ,ಹರೀಶ್ ಕುರಿ,ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು, ಪ್ರತಾಪ್ ವಕೀಲರು, ತಿಮ್ಮಣ್ಣ ಮುಂಡಸ್ತ್, ಮಾರ್ಕಂಡೇಯ, ಆರತಿ ರವಿ, ಪೂಜಾರಿ ಬಸವರಾಜ ಆರತಿ ವೀರೇಶ್,ಆಂಜನೇಯ ಸೋಮನಾಳ,ಜಿ.ಟಿ. ನಾಗರಾಜ್, ಹಾಗೂ ಯುವಕರಾದ ಮಂಜುನಾಥ ಆರತಿ,ಮಲ್ಲಿಕಾ ಗೋಟೂರ ,ಪರುಶುರಾಮ,ಮಂಜುನಾಥ ಹಂಚಿನಾಳ,ಮುತ್ತುರಾಜ್, ಆನಂದ ಛಲವಾದಿ,ಭಾಷಾ ಚಲುವಾದಿ, ಜಡಿಯಪ್ಪ, ಯಮನಪ್ಪ,ಸಂತೋಷ್ , ರಾಮು ಕಿರಿ ಕಿರಿ,ಸುರೇಶ್, ರೇವಣ್ಣ, ಗೋವಿಂದಪ್ಪ, ಜುಮ್ಮಣ್ಣ, ಸುನಿಲ್ ಕುಮಾರ್ ಆರತಿ,ಇನ್ನೂ ಅನೇಕ ಯುವಕರಿದ್ದರು

ಕಾರಟಗಿ ತಾಲೂಕು ಕಮ್ಮವಾರಿ ಸಂಘದ ಲೋಗೋ ಬಿಡುಗಡೆ:

*ಕಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕಾರಟಗಿ ತಾಲೂಕು ಕಮ್ಮವಾರಿ ಸಂಘದ ರಚನೆ ಕಾರ್ಯಕ್ರಮ ಮರ್ಲಾನಹಳ್ಳಿಯ ರೆಡ್ಡಿ ವೀರಣ್ಣ ಸ್ಕೂಲಿನಲ್ಲಿ ಜರುಗಿತು ಸಂಘದ ಲೋಗೋವನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಮ್ಮವಾರಿ ಸಮಾಜದ

ದುರ್ಗಾರಾವ್,ನೆಕ್ಕಂಟಿ ನಾಗರಾಜ, ಬಿ.ಗೋಪಾಲರಾವ್,ರವಿಕಾಂತ,ಕಂಠಮಣಿ ಶ್ರೀನಿವಾಸ ಸೇರಿ ಅನೇಕರಿದ್ದರು.

ಪದಾಧಿಕಾರಿಗಳ ಆಯ್ಕೆ:ಕಾರಟಗಿ ತಾಲೂಕು ಕಮ್ಮವಾರಿ ಸಂಘವನ್ನು ನೂತನ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಲ್ಲಾ ನಲ್ಲ

ಗೋಪಾಲಕೃಷ್ಣ, ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು,ಖಜಾಂಚಿ ಗೋಡ್ತಿ ವೆಂಕಟೇಶರಾವ್ ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳ‌ ಆಯ್ಕೆ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು ತಿಳಿಸಿದ್ದಾರೆ.

ಜುಲೈನಗರದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀರಾಮಲಿಂಗೇಶ್ವರ ಮಹಾರಥೋತ್ಸವ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಜುಲೈ ನಗರದ ಐತಿಹಾಸಿಕ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮಹಾರಥೋತ್ಸವ ಗುರುವಾರ ಸಂಜೆ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಜುಲೈ ನಗರದ ಅತಿ ಪುರಾತನ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಪ್ರತಿ ವರ್ಷ ಯುಗಾದಿಯ ಪಾಡ್ಯದಂದು ನೆರವೇರುತ್ತದೆ.

ಗಂಗಾವತಿಯ ಪುರಾತನ ಜಾತ್ರೆಗಳಲ್ಲಿ ಜುಲೈ ನಗರದ ಶ್ರೀ ರಾಮಲಿಂಗೇಶ್ವರ ಜಾತ್ರೆಯು ಒಂದಾಗಿದ್ದು, ನೂರಾರು ವರ್ಷಗಳಿಂದ ಈ ಜಾತ್ರಾ ಮಹೋತ್ಸವ ದಂದು ಬೆಳಿಗ್ಗೆ ನೈರ್ಮಲ್ಯ ವಿಸರ್ಜನೆ, ಜಲಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತದೆ. ಸಂಜೆ ಡೊಳ್ಳು,ತಾಷಾ,ಕಲಾತಂಡಗಳ ಮೆರವಣಿಗೆಯಲ್ಲಿ ಮಹಾರಥೋತ್ಸವ ಜುಲೈ ನಗರದ ಮಹಾ ಜನತೆಯ ಮಧ್ಯೆ ಸಂಭ್ರಮದಿಂದ ನೆರವೇರಿತು.

ಎಸ್ಸೆಸೆಲ್ಸಿ ಪರೀಕ್ಷೆ: ಹಾಲ್ಟ್ ಟಿಕೇಟ್ ಬಾರದೇ ಪರೀಕ್ಷೆ ಬರೆಯದ  ಮರಳಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳು!

*ಹಾಜರಾತಿ ಕಡಿಮೆ ಹಾಗೂ ಕಿರು ಪರೀಕ್ಷೆಗೆ ಗೈರು ಹಾಲ್ಟ್ ಟಿಕೇಟ್ ಬರದಿರಲು ಕಾರಣ: ಮುಖ್ಯ ಶಿಕ್ಷಕಿ ಹೇಳಿಕೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಬುಧವಾರದಿಂದ ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಿದ್ದು ತಾಲೂಕಿನ ಮರಳಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳ ಪರೀಕ್ಷೆಯ ಪ್ರವೇಶ ಪತ್ರಗಳುವ ಹಾಜರಾತಿ ಕೊರತೆ ಮತ್ತು ಶಾಲೆಯ ಕಿರು ಪರೀಕ್ಷೆ ವಿದ್ಯಾರ್ಥಿಗಳು ಗೈರು ಆಗಿದ್ದು ಬೋರ್ಡ್ ನಿಂದಲೇ ಪ್ರವೇಶ ಪತ್ರಗಳು ಬಂದಿಲ್ಲ

ಎನ್ನುವ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ವಿತರಣೆ ಮಾಡಿಲ್ಲ ಎನ್ನಲಾಗುತ್ತಿದೆ.

ಹಾಲ್ ಟಿಕೆಟ್ ಬೋರ್ಡ್ ಬಂದರೂ ನಮಗೆ ವಿತರಣೆ ಮಾಡಿಲ್ಲ ಎಂದು 12 ಜನ ವಿದ್ಯಾರ್ಥಿಗಳು ಭಾರತೀಯ ದಲಿತ ಸೇನೆ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಸಂಜೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪ್ರತಿಭಟನೆ ನಡೆಸಿ ನಮಗೆಲ್ಲ ಹಾಲ್ ಟಿಕೆಟ್ ವಿತರಿಸಬೇಕು.ನಮ್ಮ ಭವಿಷ್ಯದ ಜತೆ ಆಟವಾಡಿದ ಮುಖ್ಯ ಶಿಕ್ಷಕರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಮರಳಿ ಸರಕಾರಿ ಪ್ರೌಢಶಾಲೆಯ ಯಮನೂರ ಸಾಬ ,ಮೌನೇಶ,ಪ್ರದೀಪ್, ಮಹೇಶ,ನವಾಜ್,ಹೇಮಂತ,ಶಶಾಂಕ್,ನಿರಂಜನ್ ಮತ್ತು ಪ್ರವೀಣ್, ಶ್ರೀನಿವಾಸ, ವೆಂಕಟೇಶ ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಬಂದಿಲ್ಲ.

ಬಾಕ್ಸ್

ವಿದ್ಯಾರ್ಥಿಗಳು ಶಾಲೆಗೆ ಸತತ ಗೈರು ಮತ್ತು ಕಿರು ಪರೀಕ್ಷೆ ಬರೆದಿರುವುದರಿಂದ ಅವರುಗಳ ಹಾಲ್ ಟಿಕೆಟ್ ಅನ್ನು ಎಸೆಸೆಲ್ಸಿ ಪರೀಕ್ಷಾ ಮಂಡಳಿಯವರು ಕಳುಹಿಸಿಲ್ಲ. ಆದ್ದರಿಂದ ಇದರಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಇತರ ಶಿಕ್ಷಕರ ಪಾತ್ರ ಇಲ್ಲ, ಪಾಲಕರಿಗೂ ಸಹ ಅನೇಕ ಬಾರಿ ಮನೆಗೆ ಹೋಗಿ ಮಾಹಿತಿ ನೀಡಲಾಗಿದೆ.ಜೊತೆಗೆ ಮೊಬೈಲ್ ಮೂಲಕ ಕರೆ ಮಾಡಿ ವಿದ್ಯಾರ್ಥಿಗಳು ಸತತ ಗೈರು ಮತ್ತು ಕಿರುಪರೀಕ್ಷೆ ಬರೆದಿರುವ ಕುರಿತು ತಿಳಿಸಲಾಗಿದೆ.

-ಆಶಾ ಮುಖ್ಯ ಶಿಕ್ಷಕಿ.

 

ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಕಿರಾಣಿ ಅಂಗಡಿ, ಪಂಚರ್ ಶಾಪ್ ಸುಟ್ಟು ಭಸ್ಮ, ಲಕ್ಷಾಂತರ ನಷ್ಟ.

*ಗಂಗಾವತಿ ಬಸವೇಶ್ವರ ಸರ್ಕಲ್ ಬಳಿ ಘಟನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪ್ ಸುಟ್ಟ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ಗಂಗಾವತಿಯ ಆನೆಗೊಂದಿ ರಸ್ತೆಯಲ್ಲಿರುವ ಬಸವೇಶ್ವರ ಸರ್ಕಲ್ ಬಳಿ ಜರುಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಹೇಗೆ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದರೆ ಮಧ್ಯರಾತ್ರಿ ಏಕಾಏಕಿ ಕಿರಾಣಿ ಅಂಗಡಿ ಮತ್ತು ಪಂಚರ್ ಶಾಪಿಗೆ ಬೆಂಕಿ ಹತ್ತಿಕೊಂಡು ಕಿರಾಣಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ದವಸ ಧಾನ್ಯ ಹಾಗೂ ಪ ಪಂಚರ್ ಶಾಪಿನಲ್ಲಿದ್ದ ಟೈರ್,ಟ್ಯೂಬ್ ಇತರೆ ಸಲಕರಣೆಗಳು ಸುಟ್ಟು ಭಸ್ಮವಾಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಾಹನ ಆಗಮಿಸಿ ಬೆಂಕಿಯನ್ನು ನಂದಿಸಲಾಗಿದೆ.

ಕಿರಾಣಿ ಅಂಗಡಿ ಮಾಲೀಕ ಅಮಾತೆಮ್ಮ ಹಾಗೂ ಪಂಚರ್ ಶಾಪ್ ಮಾಲೀಕ ಶಾಮೀದ್ ಅಲಿ ಬೆಂಕಿ ಅನಾವುತದ ಬಗ್ಗೆ ಕೇಸ್ ದಾಖಲಿಸಿದ್ದಾರೆ.

ಬಸ್ಸಾಪುರ ಹತ್ತಿರ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಅಪಾರ ಪ್ರಮಾಣದ ನೀರು ಪೋಲು!

 

*ರೈತರ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿದ ನೀರು,ಲಕ್ಷಾಂತರ ರೂ.ಗಳ ನಷ್ಟ.
*ರಾಯಚೂರು ಜಿಲ್ಲೆಯ ಕುಡಿಯುವ ನೀರಿಗಾಗಿ ಮಾ.11ರಿಂದ ಎಡದಂಡೆ ಕಾಲುವೆ ನೀರು ಹರಿಸಲಾಗುತ್ತಿತ್ತು.
*ಕಾಲುವೆಯಿಂದ ನೀರು ಸೋರಿಕೆ ಕುರಿತು ರೈತರಿಂದ ನೀರಾವರಿ ಅಧಿಕಾರಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ!

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ, ಬೋಂಗಾ ಬಿದ್ದು ಕಾಲುವೆ ಒಡೆದು
ಅಪಾರ ಪ್ರಮಾಣದ ನೀರು ನೂರಾರು ಎಕರೆ ಭತ್ತದ ಗದ್ದೆ ಮತ್ತು ರೆಸಾರ್ಟ್ ಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಮಂಗಳವಾರ ಮಧ್ಯರಾತ್ರಿ ಸಮೀಪದ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಜರುಗಿದೆ.
ರಾಯಚೂರು ಜಿಲ್ಲೆಗೆ ಬೇಸಿಗೆ ನಿಮಿತ್ಯ ಕುಡಿಯುವ ನೀರನ್ನು ಎಡದಂಡೆಯ ಕಾಲುವೆಯ ಮೂಲಕ ಪೂರೈಕೆ ಮಾಡಲು ತುಂಗಭದ್ರಾ ಡ್ಯಾಮಿನಿಂದ ಮಾರ್ಚ್ 11 ರಿಂದ ನಿರಂತರವಾಗಿ ನೀರು ಹರಿಸಲಾಗುತ್ತಿತ್ತು .
ಮಂಗಳವಾರ ಕಾಲುವೆಯಲ್ಲಿ ಸುಮಾರು 2300 ಕ್ಯೂಸೆಕ್ಸ್ ನೀರನ್ನು ಹರಿಸಲಾಗಿದೆ.
ಬಸಾಪುರ ಹತ್ತಿರ ಎಡದಂಡೆ ಸಣ್ಣ ಸೇತುವೆ ಬಳಿ
ಕಳೆದ ವರ್ಷ ಬೋಂಗಾ ಬಿದ್ದಿರುವ ಕುರಿತು ರೈತರು ಜಲಸಂಪನ್ಮೂಲ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯ ಪರಿಣಾಮ ಮಂಗಳವಾರ ಮಧ್ಯರಾತ್ರಿ ಬಸಾಪುರ ಹತ್ತಿರ ಎಡದಂಡೆ ಕಾಲುವೆ ಸೋರಿಕೆ ಕಂಡು ಬಂದಿದ್ದು ಸುಮಾರು 60 ಫೀಟಿನಷ್ಟು ಕಾಲುವೆ ಕೊಚ್ಚಿಕೊಂಡು ಹೋಗಿ ನೂರಾರು ಎಕರೆ ಭತ್ತದ ಗದ್ದೆ ಹಾಗೂ ಸುಮಾರು ಹತ್ತಕ್ಕೂ ಹೆಚ್ಚು ರೆಸಾರ್ಟ್ ಗಳಿಗೆ ಕಾಲುವೆ ನೀರು ನುಗ್ಗಿದ್ದರಿಂದ ಭತ್ತದ ಬೆಳೆ ನಷ್ಟವಾಗಿದೆ, ರೆಸಾರ್ಟ್ ಗಳು ಮತ್ತು ಅವುಗಳಲ್ಲಿದ್ದ ಫ್ರಿಡ್ಜ್ ,ಜನರೇಟರ್ , ಬೈಕ್ ಗಳು, ರೆಸಾರ್ಟ್ ಗಳ ಇತರ ಸಲಕರಣೆಗಳು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಕಾಲುವೆಯಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಡ್ಯಾಮಿನ ಅಧಿಕಾರಿಗಳು ನೀರಿನ ಹರಿವನ್ನು ಕಡಿಮೆ ಮಾಡಿದ್ದರು ಸಾಣಾಪುರ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಮರಳಿ ಬಸಾಪುರ ಕಡೆ ಬರುತ್ತಿರುವುದರಿಂದ ನೀರಿನ ಪ್ರವಾಹ ತಗ್ಗುತ್ತಿಲ್ಲ ಇದರಿಂದ ಇನ್ನಷ್ಟು ಭತ್ತದ ಗದ್ದೆಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಸ್ಥಳಕ್ಕೆ ಜಲಸಂಪನ್ಮೂಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕಟಾವಿಗೆ ಬಂದಿದ್ದ ಭತ್ತದ ಗದ್ದೆಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದ್ದು ಸರಕಾರ ರೈತರಿಗೆ ಪ್ರತಿ ಎಕರೆಗೆ 50,000 ಪರಿಹಾರವನ್ನು ಕಲ್ಪಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಅಕಾಲಿಕ ಗಾಳಿ, ಮಳೆ ಧರೆಗೆ ಉರುಳಿದ ಗಿಡಮರಗಳು! ಮಲ್ಲಾಪುರದಲ್ಲಿ ಮಾವಿನ ಮರಕ್ಕೆ ಸಿಡಿಲು ಬಡಿದು ಬೆಂಕಿ!

 

 

*ವಿದ್ಯುತ್ ಸರಬರಾಜು ಸ್ಥಗಿತ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ಗಿಡಮರಗಳು ಧರೆಗೆ ಉರುಳಿವೆ.

ಗಂಗಾವತಿ ನಗರದಲ್ಲಿ ಬೀಸಿದ. ಬಿರುಗಾಳಿಯ

ಧೂಳು ಪಾದಚಾರಿಗಳು ಮತ್ತು ಬೈಕ್ ಸವಾರರು ನಿಲ್ಲುವಂತೆ ಮಾಡಿತು. ಬಿರುಗಾಳಿಗೆ ಮರಗಳ ಎಲೆಗಳು ರಸ್ತೆಗಳ ತುಂಬಾ ಹರಡಿವೆ.

ತಾಲೂಕಿನ ಮಲ್ಲಾಪುರದಲ್ಲಿ ಭಾರಿ ಪ್ರಮಾಣದ ಸಿಡಿಲು ಹೊಡೆದ ಪರಿಣಾಮ ಎರಡು ಮಾವಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ.

ಅಕಾಲಿಕ ಆನೇಕಲ್ಲು ಮಳೆ ಗಾಳಿಯ ಪರಿಣಾಮವಾಗಿ ಮಾವಿನ ಕಾಯಿಗಳು ನೆಲಕ್ಕೆ ಹುರುಳಿದ್ದು ರೈತರಿಗೆ ನಷ್ಟ ಸಂಭವಿದೆ. ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಿರುವ ಕಾರಣ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಲ್ಲಾಪುರದಲ್ಲಿ ಮಾವಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಸಂಜೆ ಅಕಾಲಿಕ ಮಳೆ ಸುರಿಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಆಣೆಕಲ್ಲು ಮಳೆಯಾಗಿದೆ. ಅಕ್ಕಾಲಿಕ ಮಳೆ ಮತ್ತು ಸಿಡಿಲು ಬಡಿದ ಪ್ರಕರಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ.

ಸಿಲಿಂಡರ್ ಅಭಾವ ಹೊಟೇಲ್ ಗಳ ಮೇಲೆ ದಾಳಿ ೧೦ ಗೃಹಬಳಕೆ ಸಿಲಿಂಡರ್ ವಶಕ್ಕೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಾನ್ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ನಗರ ಪ್ರದೇಶದಲ್ಲಿ ಹೋಟೆಲ್ ತಳ್ಳುಬಂಡಿ ಗಾಡಿ ಸೇರಿದಂತೆ ಇತರೆ ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳನ್ನು ಬಳಕೆ ಮಾಡಿ ಉಪಹಾರ, ಊಟ ತಯಾರಿಸುತ್ತಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 10

ಕ್ಕೂ ಹೆಚ್ಚು ಗೃಹಬಳಕೆಯ ಬಳಕೆಯ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಹೆಚ್ಚಾಗಿ ಅಂಗಡಿ, ತಳ್ಳುಬಂಡಿ ಚಹಾದ ಹೋಟೆಲ್ ,ಕ್ಯಾಂಟೀನ್ ಗಳಲ್ಲಿ ಗ್ರಹಬಳಕೆಯ ಸಿಲಿಂಡರನ್ನು ಅಕ್ರಮವಾಗಿ ಬಳಸುತ್ತಿದ್ದು ಮನೆಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ಗಳ ಅಭಾವ ಉಂಟಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಗೃಹ ಬಳಕೆಯ ಸಿಲಿಂಡರ್ ಬಳಸಿ ವಾಣಿಜ್ಯ ವ್ಯವಹಾರ ನಡೆಸುವವರ ವಿರುದ್ಧ ದಾಳಿ ನಡೆಸಿ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದ್ದು ಆಹಾರ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಯಾಶಸ್ ಯರೆಸೀಮೆ,ಶೇಖರಪ್ಪ, ನಾಗರತ್ನ,ಮುರ್ತುಜಾ ಸೇರಿ ಸಿಲಿಂಡರ್ ಪೂರೈಸುವ ಡೀಲರ್ ಗಳಿದ್ದರು.

ನಗರಸಭೆ:ಮನೆ ತೆರಿಗೆಯ ಆದಾಯಕ್ಕಿಂತ ವಾಣಿಜ್ಯ ತೆರಿಗೆಯ ಆದಾಯ ಹೆಚ್ಚಳಕ್ಕೆ ಆದ್ಯತೆ ನೀಡಲು ಸಲಹೆ.

*ಸಿಟಿ ಮಾರ್ಕೆಟ್ ಸ್ಥಳಾಂತರ ಮಾಡಿ ಆದಾಯ ದ್ವಿಗುಣ ಮಾಡಿ

*ಬೀದಿ ಬದಿ ವ್ಯಾಪಾರಸ್ಥರ ತೆರಿಗೆ ಮೇಲೆ ನಿಗಾ ಇರಲಿ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:ನಗರಸಭೆಯ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ೨೯ ಕೋಟಿಗು ಅಧಿಕ ಮಂಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಘೋಷಣೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಆರ್. ವಿರುಪಾಕ್ಷ ಮೂರ್ತಿ ಹೇಳಿದರು.

ಅವರು ನಗರಸಭೆಯ ಸಭಾಂಗಣದಲ್ಲಿ ೨೦೨೬-ಮತ್ತು ೨೭ ನೇ ಸಾಲಿ ಆಯವ್ಯಯ(ಹಣಕಾಸು ಮಂಡನೆಯ) ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಆದಾಯ ತೆರಿಗೆ ಶೇ. ೪ರಷ್ಟು ಹೆಚ್ಚುಗೋಳಿಸಲಾಗುವುದು.

ಯುಗಾದಿ ಹಬ್ಬದ ಮುಗಿದ ನಂತರ ಗುಂಡಮ್ಮ ಕ್ಯಾಂಪ ಸಿಟಿ ಮಾರ್ಕೆಟ್ ಗೆ ಸ್ಥಳಾಂತರ ಮಾಡಲಾಗುವುದು. ಎಲ್ಲರ ಸಲಹೆ ಸೂಚನೆಗಳನ್ನು ತೆಗದು ಕೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಅನುಮೋದನೆ ಪಡೆದುಕೊಂಡು ಬಜೆಟ್ ಘೋಷಣೆ ಮಾಡಲಾಗುವುದು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ.ಐಗೊಳ ಮಾತನಾಡಿ, ಮನೆ ತೆರಿಗೆಗಿಂತ-ವಾಣಿಜ್ಯ ತೆರಿಗೆ ಹೆಚ್ಚಿಗೆ ಗೋಳಿಸಿಕೊಳ್ಳಬೇಕು.

ವಾಣಿಜ್ಯ ತೆರಿಗೆಮತ್ತು ಜಾಹಿರಾತು ತೆರಿಗೆಮೂಲಕ ನಗರಸಭೆ ಆದಾಯ ಸಂಪನ್ಮೂಲ ಕ್ರೋಡಿಕರಿಸಿಕೋಳ್ಳಿ. ನಗರದಲ್ಲಿರುವ ಉದ್ಯಾನವನಗಳ ಸುಂದರೀಕರಣಗೊಳಿಸಿ ಸಾರ್ವಜನಿಕರಿಗೆ ಹೋರೆಯಾಗಲಾರದಂತೆ ಶುಲ್ಕ ನಿಗದುಪಡಿಸಿಕೊಳ್ಳಿ ಎಂದರು.

ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಮೊದಲು ಗುಂಡಮ್ಮ ಕ್ಯಾಂಪಗೆ ಮಾರುಕಟ್ಟೆ ಸ್ಥಳಾಂತರಿಸಿ ನಗರಸಭೆಯ ಆದಾಯ ದ್ವಿಗುಣಗೋಳಿಸಿ. ಅನಧಿಕೃತ ಲೇಔಟಗಳಲ್ಲಿ ಇರುವ ಮನೆಗಳನ್ನು ಸಕ್ರಮ ಗೊಳಿಸಿ ನಗರಸಭೆ ಆದಾಯ ಭರಿಸಿಕೊಂಡು ಮೂಲಭುತ ಸೌರ್ಕಯ ಒದಗಿಸಿ ಎಂದರು.

ನಗರಸಭೆಯ ಮಾಜಿ ಅಧ್ಯಕ್ಷ ಮೌಲಾಸಾಬ,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ ಚೌಡ್ಕಿ,ನಗರಸಭೆ ಸದಸ್ಯ ಮಸ್ತಕಅಲಿ ಮಾತನಾಡಿ ನಗರಸಭೆ ಆದಾಯವನ್ನು ವಾಣಿಜ್ಯ ಮೂಲಕ ಇಮ್ಮಡಿಗೊಳಿಸಿಕೊಳ್ಳಿ. ಆಸ್ತಿ ತೆರಿಗೆ ಹೆಚ್ಚಿಸಿ ತೊಂದರೆ ಮಾಡಬೇಡಿ ಎಂದರು.

ಸಭೆಯಲ್ಲಿ ವೀರಭದ್ರಪ್ಪ ಎಸ್, ಖಾದರ ಪಾಶಾ, ಪತ್ರಕರ್ತರಾದ ವೀರಾಪೂರ ಕೃಷ್ಣ,ಎಂ.ಜೆ. ಶ್ರೀನಿವಾಸ,ಪ್ರಸನ್ನದೇಸಾಯಿ ಅನಿಸಿಕೆ ವ್ಯಕ್ತಪಡಿಸಿದರು.