Breaking News
ಕಾರಟಗಿ ತಾಲೂಕು ಕಮ್ಮವಾರಿ ಸಂಘದ ಲೋಗೋ ಬಿಡುಗಡೆ:

*ಕಮ್ಮ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಕಾರಟಗಿ ತಾಲೂಕು ಕಮ್ಮವಾರಿ ಸಂಘದ ರಚನೆ ಕಾರ್ಯಕ್ರಮ ಮರ್ಲಾನಹಳ್ಳಿಯ ರೆಡ್ಡಿ ವೀರಣ್ಣ ಸ್ಕೂಲಿನಲ್ಲಿ ಜರುಗಿತು ಸಂಘದ ಲೋಗೋವನ್ನು ಕಮ್ಮವಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಕಮ್ಮವಾರಿ ಸಮಾಜದ

ದುರ್ಗಾರಾವ್,ನೆಕ್ಕಂಟಿ ನಾಗರಾಜ, ಬಿ.ಗೋಪಾಲರಾವ್,ರವಿಕಾಂತ,ಕಂಠಮಣಿ ಶ್ರೀನಿವಾಸ ಸೇರಿ ಅನೇಕರಿದ್ದರು.

ಪದಾಧಿಕಾರಿಗಳ ಆಯ್ಕೆ:ಕಾರಟಗಿ ತಾಲೂಕು ಕಮ್ಮವಾರಿ ಸಂಘವನ್ನು ನೂತನ ರಚನೆ ಮಾಡಲಾಗಿದ್ದು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಲ್ಲಾ ನಲ್ಲ

ಗೋಪಾಲಕೃಷ್ಣ, ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು,ಖಜಾಂಚಿ ಗೋಡ್ತಿ ವೆಂಕಟೇಶರಾವ್ ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳ‌ ಆಯ್ಕೆ ಶೀಘ್ರದಲ್ಲೇ ಮಾಡಲಾಗುತ್ತದೆ ಎಂದು ಕಾರ್ಯದರ್ಶಿ ಜಾಲಿಪರ್ತಿ ರಾಮಬಾಬು ತಿಳಿಸಿದ್ದಾರೆ.

ಹೊಸ ವರ್ಷದ ಯುಗಾದಿ ಮುಳ್ಳಿನ ಪವಾಡ!

 

*ಶ್ರೀ ಆಂಜನೇಯಸ್ವಾಮಿ ಪಲ್ಲಕ್ಕಿ ಮಹೋತ್ಸವ.
*ಶತಮಾನಗಳಿಂದ ವೈಶಿಷ್ಟ್ಯಪೂರ್ಣ
ಯುಗಾದಿ ಆಚರಣೆ.

ಕಿಷ್ಕಿಂಧವಾಣಿ ಸುದ್ದಿ
ಹಗರಿಬೊಮ್ಮನಹಳ್ಳಿ:
ಹೊಸ ವರ್ಷ ಯುಗಾದಿ ಹಬ್ಬ ಕನ್ನಡ ನಾಡಿನದ್ಯಂತ ವೈಶಿಷ್ಟ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ.
ಆದರೆ ತುಂಗಭದ್ರಾ ಡ್ಯಾಂ ನಿರ್ಮಾಣ ನಂತರ ಡ್ಯಾಮಿನ ಸುತ್ತಲಿರುವ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈ ಹಬ್ಬವನ್ನು ವೈಶಿಷ್ಟ್ಯ ಪೂರ್ಣವಾಗಿ ಆಚರಣೆ ಮಾಡಲಾಗುತ್ತದೆ. ಹಗರಿಬೊಮ್ಮನಹಳ್ಳಿ, ಹಡಗಲಿ,ಕೊಪ್ಪಳ ತಾಲೂಕು ಸೇರಿ ಇತರೆ ಭಾಗದಲ್ಲಿ ಯುಗಾದಿ ಹಬ್ಬವನ್ನು ಯುಗಾದಿ ಅಮಾವಾಸ್ಯೆ ಯುಗಾದಿ ಪಾಡ್ಯ ನಂತರದ ದಿನವನ್ನು ಯುಗಾದಿ ಮುಳ್ಳಿನ ಪವಾಡ ದಿನ ಅಥವಾ ಬ್ಯಾಟಿ ಗಿಡ ಎಂದು ಕರೆಯುವ ಮೂಲಕ ಮೂರು ದಿನಗಳ ಕಾಲ ಹೊಸ ವರ್ಷ ಯುಗಾದಿವನ್ನು ಆಚರಣೆ ಮಾಡುತ್ತಾರೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಪುರ ಚಿಂತಪಲ್ಲಿ ಈ ಗ್ರಾಮಗಳಲ್ಲಿ ಯುಗಾದಿ ಪಾಡ್ಯದ
ಮರುದಿನ ಬ್ಯಾಟಿ ಗಿಡ ಹಬ್ಬವನ್ನು ಆಚರಿಸಲಾಗುತ್ತದೆ. ಬ್ಯಾಟಿ ಗಿಡದಂದು ಊರ ಹೊರಗಿನ ಬಹಳ ಮುಳ್ಳಿನಿಂದ ಕೂಡಿದ ಕಾರಿ ಗಿಡಗಳನ್ನು ತಂದು ರಾಶಿ ಹಾಕಿ ಇದಕ್ಕೆ ನೀರನ್ನು ಸುರಿದು ಶ್ರೀ ಆಂಜನೇಯ ಮೂರ್ತಿ ಇರುವ ಪಲ್ಲಕ್ಕಿ ಹೊತ್ತು ಮೆರವಣಿಗೆಯಲ್ಲಿ ಸಾಗುವವರಿಗೆ ಡೊಳ್ಳು,ಹಲಗೆ,ತಾಷಾ ಹೀಗೆ ಜನಪದ ಮೆರವಣಿಗೆ ಸಾಥ್ ನೀಡುತ್ತದೆ. ಈ ಸಂದರ್ಭದಲ್ಲಿ ದೇವರು ಮೈಮೇಲೆ ಬಂದವರು ಈ ಮುಳ್ಳಿನ ರಾಶಿಯ ಮೇಲೆ ಹಾರುತ್ತಾರೆ. ಕೂಡಲೇ ಇವರ ಮೇಲೆ ನೀರನ್ನು ಸುರಿದು ಇವರನ್ನು ತೆಗೆದುಕೊಂಡು ಹೋಗಿ ಶ್ರೀ ಆಂಜನೇಯನ ಗರ್ಭಗುಡಿಯ ಮುಂದಿನ ಜಾಗದಲ್ಲಿ ಹಾಕಲಾಗುತ್ತದೆ. ಪಲ್ಲಕ್ಕಿ ದೇವಸ್ಥಾನ ಪ್ರವೇಶದ ನಂತರ ಇಡೀ ಗ್ರಾಮಸ್ಥರು ಒಂದೆಡೆ ಸೇರಿ ದೇವಸ್ಥಾನದ ಧ್ವಜ (ಪಟಾಕ್ಷಿ) ಕಾಣಿಕೆ ಪೆಟ್ಟಿಗೆ ಸೇರಿದಂತೆ ದೇವರ ವಸ್ತುಗಳನ್ನು ಹರಾಜಿನ ಮೂಲಕ ಹರಾಜು ಮಾಡಿ ಈ ಹಣವನ್ನು ದೇವಸ್ಥಾನದ ಧಾರ್ಮಿಕ ಚಟುವಟಿಕೆಗಳಿಗೆ ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಾತಿ, ಭೇದ, ರಾಜಕೀಯ ಎಲ್ಲವನ್ನೂ ಮರೆತು ಎಲ್ಲರೂ ಒಂದೆಡೆ ಸೇರಿ ಶ್ರೀ ಆಂಜನೇಯನಿಗೆ ಜೈಕಾರವನ್ನು ಹಾಕುತ್ತಾರೆ. ನಂತರ ಯುಗಾದಿ ಹಬ್ಬ ಮುಕ್ತಾಯವಾದಂತೆ ಸರಿ ಇಂತ ವೈಶಿಷ್ಟ್ಯ ಪೂರ್ಣ ಆಚರಣೆಗಳ ಮೂಲಕ ಯುಗಾದಿ ಹಬ್ಬ ಹಗರಿಬೊಮ್ಮನಹಳ್ಳಿ ತಾಲೂಕಿನ ಅತ್ಯಂತ ಸಡಗರ ಸಂಭ್ರಮವನ್ನು ಸಾರುತ್ತದೆ