Breaking News
ನಿರ್ಬಂಧ ಮಧ್ಯದಲ್ಲಿ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಬಂದ ಪುನೀತ್ ಕೆರೆಹಳ್ಳಿ, ಪೊಲೀಸರ‌ ಆಕ್ಷೇಪ ಉಲ್ಲಂಘಿಸಿ ಬೆಟ್ಟ ಹತ್ತಿರ ದೇವರ ದರ್ಶನ.

*ಮಾ.23 ರಂದು ಯಲಬುರ್ಗಾ ಹಿರೇವಂಕಲಕುಂಟಾದ ಹಿಂದು ಸಮಾವೇಶಕ್ಕೆ ಪ್ರಮೋದ್ ಮುತಾಲಿಕ್ ಹಾಗೂ ಪುನೀತ ಕೆರೆಹಳ್ಳಿ ಆಹ್ವಾನ ಹಿನ್ನೆಲೆಯಲ್ಲಿ ಇಬ್ಬರಿಗೂ ಜಿಲ್ಲಾಡಳಿತ ನಿರ್ಬಂಧ.

*ಮಾಹಿತಿ ತಿಳಿಯದೇ ಅಂಜನಾದ್ರಿ ಗೆ ಆಗಮಿಸಿದ ಪುನೀತ ಕೆರೆಹಳ್ಳಿ,ಪೊಲೀಸರೊಂದಿಗೆ ವಾಗ್ವಾದ.

*ಪಟ್ಟು ಬಿಡದೇ ಬೆಟ್ಟ ಹತ್ತಿದ ಕೆರೆಹಳ್ಳಿ ಫಾಲೋ ಮಾಡಿದ ಪೊಲೀಸರು.

*ಕೊನೆಗೂ ಪುನೀತ್ ಗೆ ನೋಟೀಸ್ ನೀಡಿ ಜಿಲ್ಲಾ ಗಡಿ ದಾಟಿಸಿದ ಪೊಲೀಸರು.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಗಂಗಾವತಿ ತಾಲೂಕಿನ ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಪರ್ವತಕ್ಕೆ ದರ್ಶನಕ್ಕೆ ಆಗಮಿಸಿದ್ದ ಆರೆಸ್ಸೆಸ್ ಸಂಘ ಪರಿವಾರದ ಪುನೀತ್ ಕೆರೆಹಳ್ಳಿ ಅವರಿಗೆ ಕೊಪ್ಪಳ ಜಿಲ್ಲಾಡಳಿತ ನಿಷೇಧವಿದ್ದರೂ ಕಿಷ್ಕಿಂಧಾ ಅಂಜನಾದ್ರಿ ದರ್ಶನಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ಶನಿವಾರ ಬೆಳ್ಳಿಗ್ಗೆ ಜರುಗಿತು.

ನೋಟಿಸ್ ನೀಡದೇ ಅಂಜನಾದ್ರಿ ದರ್ಶನಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಪುನೀತ್ ಕೆರೆಹಳ್ಳಿ ಖಂಡಿಸಿ ಕಿಷ್ಕಿಂಧಾ ಅಂಜನಾದ್ರಿ ದರ್ಶನ ಪಡದೇ ಪಡೆಯುತ್ತೇನೆ ರಾಜ್ಯ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಜಿಲ್ಲಾಡಳಿತದ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿ ಎಂದು ಪೊಲೀಸರ ವಿರೋಧದ ಮಧ್ಯ ಬೆಟ್ಟ ಹತ್ತಿ ಶ್ರೀ ಆಂಜನೇಯನ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ದರ್ಶನದ ನಂತರ ಬೆಟ್ಟ ಇಳಿದ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರು ಜಿಲ್ಲಾ ಪ್ರವೇಶದ ನಿರ್ಬಂಧದ ನೋಟೀಸ್ ಅನ್ನ ನೀಡಿದರು ನಂತರ ಅವರನ್ನು ಕೊಪ್ಪಳ ಜಿಲ್ಲೆಯ ಗಡಿ ದಾಟಿಸಿ ಕಳುಹಿಸಿದರು.

ಮಾ.23 ರಂದು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಆರೆಸ್ಸೆಸ್ ಹಾಗೂ ಸಂಘ ಪರಿವಾರದವರು ಆಯೋಜಿಸಿರುವ ಹಿಂದು ಸಮಾವೇಶದಲ್ಲಿ ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಹಾಗೂ ಗೋ ರಕ್ಷಣೆ ಹೋರಾಟ ಮಾಡುವ ಪುನೀತ್ ಕೆರೆಹಳ್ಳಿ ಮುಖ್ಯಭಾಷಣ ಮಾಡಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ ಹಾಗೂ ಪುನೀತ್ ಕೆರೆಹಳ್ಳಿ ಅವರಿಗೆ ಮಾ.21-23 ಸಂಜೆ ವರೆಗೆ

ಕೊಪ್ಪಳ ಜಿಲ್ಲಾ ಪ್ರವಾಸವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಡಾ.ಸುರೇಶ ಇಟ್ನಾಳ

ಆದೇಶ ಮಾಡಿದ್ದಾರೆ.

ಎಸ್ಸಿ ಒಳಮೀಸಲಾತಿ ನ್ಯಾ. ನಾಗಮೋಹನ್ ದಾಸ್ ಅವೈಜ್ಞಾನಿಕ ವರದಿ ತಿರಸ್ಕಾರಕ್ಕೆ ದಲಿತ ಬಲಗೈ ಬಣ ಆಗ್ರಹ.

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ :ಎಸ್ಸಿ

ಒಳ ಮೀಸಲಾತಿ ಹಂಚಿಕೆಯ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ವರದಿಯು ಅವೈಜ್ಞಾನಿಕವಾಗಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಿರಸ್ಕರಿಸಿ ಮತ್ತೊಮ್ಮೆ ಮೀಸಲಾತಿ ಮರು ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯದ ಒಕ್ಕೂಟದ ಅಧ್ಯಕ್ಷ ಜ್ಞಾನ ಪ್ರಕಾಶ ಸ್ವಾಮೀಜಿಯವರ ಆದೇಶದಂತೆ ಗಂಗಾವತಿಯ ಸರ್ಕಿಟ್ ಹೌಸ್ ನಲ್ಲಿ ದಲಿತ ಬಲಗೈ ಸಮುದಾಯದ ಸಂಘಟನೆಗಳ ನಾಯಕರೆಲ್ಲರರು ಒತ್ತಾಯಿಸಿದರು. ಈ ಸಂಬಂಧ ಮಾ. 25 ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ದಲಿತ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆಗೆ

ತೆರಳು ಕುರಿತು ಚರ್ಚೆ ನಡೆಸಲಾಯಿತು.

ದಲಿತ ಸಮುದಾಯದ ಹಿರಿಯ ನಾಯಕ ಕುಂಟೋಜಿ ಮರಿಯಪ್ಪ ಮಾತನಾಡಿ,

ನಾವು ಮೀಸಲಾತಿಯ ವಿರೋಧಿಗಳು ಅಲ್ಲಾ. ಆದರೆ ರೋಸ್ಟರ್ ಪದ್ಧತಿಯಲ್ಲಿ ಸಮನಾಗಿ ಹಂಚಿಕೆ ಮಾಡದೆ ಬಿಂದುಗಳಲ್ಲಿ ಏರುಪೇರು ಮಾಡಿದ್ದು ಇವುಗಳನ್ನು ಸರಿಪಡಿಯುವಕರಿದ್ದ.ಇಲ್ಲವಾದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುವ ಸಾದ್ಯತೆ ಇದ್ದು ಕೂಡಲೇ ಸರಿಪಡಿಸಬೇಕು.

ನ್ಯಾಯಬದ್ಧ ಹೋರಾಟಕ್ಕೆ ಕೊಪ್ಪಳದ ವಿವಿಧ ತಾಲೂಕಿನ ದಲಿತ ಮುಖಂಡರು, ಸಂಘಟನೆಗಾರರು, ಮಹಿಳೆಯರು,ಯುವಕರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಲಕ್ಷಾಂತರ ಜನ ಸೇರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಬೇಕು ಮತ್ತು ಈ ಬೃಹತ್ ಪ್ರತಿಭಟನೆ ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕೆಂದರು.

ಸಮುದಾಯದ ಹಿರಿಯ

ಸಭೆಯಲ್ಲಿ ದಲಿತ ಬಲಗೈ ಸಮುದಾಯದ ಮುಖಂಡರಾದ ದೊಡ್ಡ ಬೋಜಪ್ಪ, ಸೋಮಶೇಖರ್ ಬಣ್ಣದಮನೆ,

ಜಿ.ಹುಲಗಪ್ಪ ಮಾಸ್ತರ, ಮಾಗಿ ಹುಲಗಪ್ಪ, ಅಂಬಣ್ಣ ಛಲವಾದಿ,ಹರೀಶ್ ಕುರಿ,ರಾಮಚಂದ್ರಪ್ಪ, ಹುಸೇನಪ್ಪ ಹಂಚಿನಾಳ ವಕೀಲರು, ಪ್ರತಾಪ್ ವಕೀಲರು, ತಿಮ್ಮಣ್ಣ ಮುಂಡಸ್ತ್, ಮಾರ್ಕಂಡೇಯ, ಆರತಿ ರವಿ, ಪೂಜಾರಿ ಬಸವರಾಜ ಆರತಿ ವೀರೇಶ್,ಆಂಜನೇಯ ಸೋಮನಾಳ,ಜಿ.ಟಿ. ನಾಗರಾಜ್, ಹಾಗೂ ಯುವಕರಾದ ಮಂಜುನಾಥ ಆರತಿ,ಮಲ್ಲಿಕಾ ಗೋಟೂರ ,ಪರುಶುರಾಮ,ಮಂಜುನಾಥ ಹಂಚಿನಾಳ,ಮುತ್ತುರಾಜ್, ಆನಂದ ಛಲವಾದಿ,ಭಾಷಾ ಚಲುವಾದಿ, ಜಡಿಯಪ್ಪ, ಯಮನಪ್ಪ,ಸಂತೋಷ್ , ರಾಮು ಕಿರಿ ಕಿರಿ,ಸುರೇಶ್, ರೇವಣ್ಣ, ಗೋವಿಂದಪ್ಪ, ಜುಮ್ಮಣ್ಣ, ಸುನಿಲ್ ಕುಮಾರ್ ಆರತಿ,ಇನ್ನೂ ಅನೇಕ ಯುವಕರಿದ್ದರು

ಜನರನ್ನು ಬೆಸೆಯಲು ಪ್ರತಿ ಧರ್ಮದಲ್ಲಿ ಹಬ್ಬಗಳು ಇವೆ:ಗಾಲಿ ಜನಾರ್ದನ ರೆಡ್ಡಿ

* ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಪ್ರತಿ ಧರ್ಮದಲ್ಲೂ ಜನರನ್ನು ಪರಸ್ಪರ ಬೆಸೆಯಲು ಹಬ್ಬಗಳು ಇವೆ, ಆದ್ದರಿಂದ ಜಾತಿ,ಧರ್ಮದ ಹೆಸರಿನಲ್ಲಿ ಅಶಾಂತಿ ಸೃಷ್ಟಿ ಸಲ್ಲದು, ಪವಿತ್ರ ರಂಜಾನ್ ಐಕ್ಯತೆಯನ್ನು ಹೇಳುತ್ತದೆ ಎಂದು ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಅವರು ನಗರದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರ ಜೊತೆ ಸೇರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪರಸ್ಪರ ಶುಭ ಕೋರಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿ ನಿಂದಲೂ ಧರ್ಮ,ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ, ಅಭಿವೃದ್ಧಿ ಮತ್ತು ಐಕ್ಯತೆ ಹೆಸರಿನಲ್ಲಿ ರಾಜಕೀಯ ಮಾಡಿ ಬಳ್ಳಾರಿ ಮತ್ತು ಗಂಗಾವತಿಯನ್ನು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮುಸ್ಲಿಂ ಪ್ರತಿಯೊಬ್ಬರು ದೇಶಭಕ್ತರಾಗಿ ದೇಶ,ಧರ್ಮಕ್ಕೆ ಮೊದಲು ಆದ್ಯತೆ ನೀಡಬೇಕು. ಆ ಮೂಲಕ ದೇಶದ ಅಭಿವೃದ್ಧಿ ಮತ್ತು ವೈಯಕ್ತಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಗುರುಗಳಾದ ಕಮಲ್ ಮುಸ್ತಾಪ್ ಹಾಗೂ ಈದ್ಗಾ ಕಮೀಟಿಯ ಪದಾಧಿಕಾರಿಗಳು ಮುಸ್ಲಿಂ ಸಮಾಜದ ಗುರುಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.