Breaking News
ಅಕಾಲಿಕ ಗಾಳಿ, ಮಳೆ ಧರೆಗೆ ಉರುಳಿದ ಗಿಡಮರಗಳು! ಮಲ್ಲಾಪುರದಲ್ಲಿ ಮಾವಿನ ಮರಕ್ಕೆ ಸಿಡಿಲು ಬಡಿದು ಬೆಂಕಿ!

 

 

*ವಿದ್ಯುತ್ ಸರಬರಾಜು ಸ್ಥಗಿತ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಮಳೆಗೆ ಗಿಡಮರಗಳು ಧರೆಗೆ ಉರುಳಿವೆ.

ಗಂಗಾವತಿ ನಗರದಲ್ಲಿ ಬೀಸಿದ. ಬಿರುಗಾಳಿಯ

ಧೂಳು ಪಾದಚಾರಿಗಳು ಮತ್ತು ಬೈಕ್ ಸವಾರರು ನಿಲ್ಲುವಂತೆ ಮಾಡಿತು. ಬಿರುಗಾಳಿಗೆ ಮರಗಳ ಎಲೆಗಳು ರಸ್ತೆಗಳ ತುಂಬಾ ಹರಡಿವೆ.

ತಾಲೂಕಿನ ಮಲ್ಲಾಪುರದಲ್ಲಿ ಭಾರಿ ಪ್ರಮಾಣದ ಸಿಡಿಲು ಹೊಡೆದ ಪರಿಣಾಮ ಎರಡು ಮಾವಿನ ಮರಗಳಿಗೆ ಬೆಂಕಿ ಹತ್ತಿಕೊಂಡಿದೆ.

ಅಕಾಲಿಕ ಆನೇಕಲ್ಲು ಮಳೆ ಗಾಳಿಯ ಪರಿಣಾಮವಾಗಿ ಮಾವಿನ ಕಾಯಿಗಳು ನೆಲಕ್ಕೆ ಹುರುಳಿದ್ದು ರೈತರಿಗೆ ನಷ್ಟ ಸಂಭವಿದೆ. ಗಾಳಿಯಿಂದ ವಿದ್ಯುತ್ ಕಂಬಗಳು ಬಿದ್ದಿರುವ ಕಾರಣ ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಮಲ್ಲಾಪುರದಲ್ಲಿ ಮಾವಿನ ಮರಗಳಿಗೆ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಸಂಜೆ ಅಕಾಲಿಕ ಮಳೆ ಸುರಿಯುತ್ತಿದ್ದು ಗ್ರಾಮೀಣ ಭಾಗದಲ್ಲಿ ಆಣೆಕಲ್ಲು ಮಳೆಯಾಗಿದೆ. ಅಕ್ಕಾಲಿಕ ಮಳೆ ಮತ್ತು ಸಿಡಿಲು ಬಡಿದ ಪ್ರಕರಣದಲ್ಲಿ ಜನ ಜಾನುವಾರುಗಳಿಗೆ ಯಾವುದೇ ಹಾನಿಯಾಗಿಲ್ಲ.

ಸಿಲಿಂಡರ್ ಅಭಾವ ಹೊಟೇಲ್ ಗಳ ಮೇಲೆ ದಾಳಿ ೧೦ ಗೃಹಬಳಕೆ ಸಿಲಿಂಡರ್ ವಶಕ್ಕೆ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಇರಾನ್ ಯುದ್ಧ ಪರಿಣಾಮದಿಂದ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ನಗರ ಪ್ರದೇಶದಲ್ಲಿ ಹೋಟೆಲ್ ತಳ್ಳುಬಂಡಿ ಗಾಡಿ ಸೇರಿದಂತೆ ಇತರೆ ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್ ಗಳನ್ನು ಬಳಕೆ ಮಾಡಿ ಉಪಹಾರ, ಊಟ ತಯಾರಿಸುತ್ತಿದ್ದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ 10

ಕ್ಕೂ ಹೆಚ್ಚು ಗೃಹಬಳಕೆಯ ಬಳಕೆಯ ಸಿಲಿಂಡರ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದಲ್ಲಿ ಹೆಚ್ಚಾಗಿ ಅಂಗಡಿ, ತಳ್ಳುಬಂಡಿ ಚಹಾದ ಹೋಟೆಲ್ ,ಕ್ಯಾಂಟೀನ್ ಗಳಲ್ಲಿ ಗ್ರಹಬಳಕೆಯ ಸಿಲಿಂಡರನ್ನು ಅಕ್ರಮವಾಗಿ ಬಳಸುತ್ತಿದ್ದು ಮನೆಗಳಲ್ಲಿ ಗ್ರಾಹಕರಿಗೆ ಸಿಲಿಂಡರ್ ಗಳ ಅಭಾವ ಉಂಟಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಗೃಹ ಬಳಕೆಯ ಸಿಲಿಂಡರ್ ಬಳಸಿ ವಾಣಿಜ್ಯ ವ್ಯವಹಾರ ನಡೆಸುವವರ ವಿರುದ್ಧ ದಾಳಿ ನಡೆಸಿ ಕೇಸ್ ದಾಖಲಿಸಲು ತೀರ್ಮಾನಿಸಲಾಗಿದ್ದು ಆಹಾರ ಇಲಾಖೆ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ.

ದಾಳಿಯ ಸಂದರ್ಭದಲ್ಲಿ ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಯಾಶಸ್ ಯರೆಸೀಮೆ,ಶೇಖರಪ್ಪ, ನಾಗರತ್ನ,ಮುರ್ತುಜಾ ಸೇರಿ ಸಿಲಿಂಡರ್ ಪೂರೈಸುವ ಡೀಲರ್ ಗಳಿದ್ದರು.