Breaking News
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ:ಭಾರತ ಫೈನಲ್ ಗೆ ಪ್ರವೇಶ.

ಕಿಷ್ಕಿಂಧವಾಣಿ ಸುದ್ದಿ
ಮುಂಬೈ: ಟಿ20 ವಿಶ್ವ ಕ್ರಿಕೆಟ್ ನ ಭಾರತ ಮತ್ತು ಇಂಗ್ಲೆಂಡ್ ಪಂದ್ಯಾವಳಿ ಗುರುವಾರ  ಮುಂಬೈನ ವಾಂಖಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿತು, ಈ ಪಂದ್ಯಾವಳಿಯಲ್ಲಿ ಜಸ್ಪ್ರೀತ್ ಬ್ರೂಮ್ರಾ ಹಾಗೂ ಸಂಜೀವ ಶಾಮಸನ್ ಅಮೋಘ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ಅನ್ನು ಮಣಿಸಿದರು. ಅತ್ಯಂತ ರೋಮಾಂಚಕಾರಿಘಟ್ಟದಲ್ಲಿ ಕೊನೆಯ ಅವಧಿಯ ಬಾಲಿಂಗ್ ನಲ್ಲಿ ಭಾರತವನ್ನು ಗೆಲ್ಲಿಸುವಲ್ಲಿ ಇವರಿಬ್ಬರು ಕಾರಣೀಕರ್ತರಿದ್ದಾರೆ
ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 07ವಿಕೇಟಗಳ ನಷ್ಟಕ್ಜೆ
253 ರನ್ ಗಳಿಸಿದರು.ಇದರ ಬೆನ್ನಟ್ಟಿದ ಇಂಗ್ಲೆಂಡ್ ನವರು 07ವಿಕೇಟ್ ಗಳ ನಷ್ಟ 246 ಗಳಿಸಿ 07 ರನ್ ಅಂತರದಲ್ಲಿ ಭಾರತ ಗೆಲುವು ಪಡೆಯಿತು.
ಫೈನಲ್ ಪಂದ್ಯಾವಳಿ ಗುಜರಾತ್ ನ ಅಹಮದಾಬಾದ್ ನಲ್ಲಿ ಮಾ.08 ರಂದು ಸಂಜೆ 07 ಗಂಟೆಗೆ ನಡೆಯಲಿದೆ.

ಹಂಪಪಟ್ಟಣ:ಶಾಲೆಯಲ್ಲಿ ಮಕ್ಕಳಿಂದ ಅನುಚಿತ ಕಾರ್ಯ,ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ. * ಇಬ್ಬರು ಶಿಕ್ಷಕರ ವರ್ಗಾವಣೆಗೆ ಒತ್ತಾಯ.

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ : ತಾಲೂಕಿನ ಹಂಪಾಪಟ್ಟಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಅನುಚಿತ ಕಾರ್ಯ ಮಾಡಿಸಿದ ಇಬ್ಬರು ಶಿಕ್ಷಕರನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿ ಬಿಇಓಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ರೈತ ಮುಖಂಡ ಬಂಟರ ಕುಬೇರ ಮಾತನಾಡಿ, ಶಿಕ್ಷಕರನ್ನು ದೇವರ ಸಮವಾಗಿ ಕಾಣುವ ನಮ್ಮ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಕರಿಬ್ಬರ ಅನುಚಿತ ವರ್ತನೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗತೊಡಗಿದೆ ಎಂದು ನೋವನ್ನು ತೋಡಿಕೊಂಡರು.

ಪ್ರಭಾರಿ ಮುಖ್ಯ ಶಿಕ್ಷಕ ಮತ್ತು ದೈಹಿಕ ಶಿಕ್ಷಕ ಇವರಿಬ್ಬರನ್ನು ಈ ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಿ ಶಾಲೆಯಲ್ಲಿ ನಡೆಯುತ್ತಿರುವ ದುರ್ವತನೆ ಬಗ್ಗೆ ನ್ಯಾಯ ಸಮ್ಮತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಈ ಕೂಡಲೆ ಕ್ರಿಮಿನಲ್ ಕೇಸ್ ದಾಖಲಿಸಿ ಸಸ್ಪೆಂಡ್ ಮಾಡಬೇಕೆಂದರು.

ನಮ್ಮೂರಿನ ಶಾಲೆಯಲ್ಲಿ ಇಂಥ ಘಟನೆಗಳು ಯಾವತ್ತು ನಡೆದಿರಲಿಲ್ಲ, ಆದರೆ ಯಾರದ್ದೋ ವೈಯಕ್ತಿಕ ಕಾರಣದಿಂದ ಈ ಘಟನೆ ನಡೆದುಹೋಗಿದೆ ಇದರಿಂದ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ ಎಂದರು. ನಮ್ಮ ಶಾಲೆಯಲ್ಲಿ ನಡೆದ ಘಟನೆ ಪೊಲೀಸ್ ಠಾಣೆಯವರಿಗೆ ಹೋಗಿರುವುದು ದುರದೃಷ್ಟಕರ ಸಂಗತಿ. ಇದರಿಂದ ಶಾಲೆಗೆ ಕಪ್ಪು ಚುಕ್ಕಿ ಬಂದಂತಾಗಿದೆ ಎಂದರು.

ಈ ಕೊಡಲೇ ಶಿಕ್ಷಕರಿಬ್ಬರನ್ನು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ವರ್ಗಾವಣೆ ಮಾಡುವುದಷ್ಟೇ ಅಲ್ಲ. ಶಿಕ್ಷಣ ಇಲಾಖೆಯ ನಿಯಮಾನುಸಾರ ತನಿಖೆ ಮಾಡಿ, ತಪ್ಪಿತಸ್ಥ ಶಿಕ್ಷಕರನ್ನು ಸಸ್ಪೆಂಡ್ ಮಾಡಬೇಕು ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷ ವಿ, ಹನುಮಂತ ಆಗ್ರಹಿಸಿದರು,

ಈ ಸಂಧರ್ಭದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯ ಬಿ ನಾಗರಾಜ್, , ನವೋದಯ ಯುವಕ ಸಂಘದ ಅಧ್ಯಕ್ಷ ಉಪ್ಪಾರ್ ಹನುಮಂತ, ಗ್ರಾಮದ ರೈತ ಮುಖಂಡ ಬಂಟರ ಸೋಮಣ್ಣ, ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಬಳಗದ ಸೇರಗಾರ್ ಸೋಮನಾಥ್, ತಳವಾರ್ ರಾಮು, ಸೀಗೇನಹಳ್ಳಿ ಚಂದ್ರು, ಸಿ, ಪ್ರಹ್ಲಾದ್, ಸೀಗೆನಹಳ್ಳಿ ಬಸವರಾಜ, ಹನುಮಂತ ಎಚ್ ತೀರ್ಥ ಪ್ರಸಾದ್, ಹೆಚ್ ಅಶೋಕ್, ಪತ್ರಿ ಯಲ್ಲಪ್ಪ ಸೀಗೇನಹಳ್ಳಿ ಮಾರುತಿ, ಸೋಮನಾಥ ಭಜಂತ್ರಿ, ಬರದರೂ ಸೋಮು ಇತರರು ಇದ್ದರು

*”ಹಂಪಾಪಟ್ಟಣದ ಶಾಲೆಯಲ್ಲಿ ಜರುಗಿರುವ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ

ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ.ವರದಿಯನ್ನು ಡಿಡಿಪಿಐ ಅವರಿಗೆ ಸಲ್ಲಿಸಲಾಗುತ್ತದೆ.”

-ಪ್ರಭಾಕರ ಬಿಇಓ ಹಗರಿಬೊಮ್ಮನಹಳ್ಳಿ.