Breaking News
ತಳುವಗೇರಾ ಜಾತ್ರೆಯ ಹತ್ಯೆ ಪ್ರಕರಣ ತೀರ್ಪು ಪ್ರಕಟ: 15 ಅಪರಾಧಿಗಳಿಗೆ 7 ವರ್ಷ ಕಠಿಣ ಶಿಕ್ಷೆ ಪ್ರಕಟ

ಕಿಷ್ಕಿಂಧವಾಣಿ ಸುದ್ದಿ

ಕೊಪ್ಪಳ: 2019ರಲ್ಲಿ ಕುಷ್ಟಗಿ ತಾಲೂಕಿನ ತಳುವಗೇರಾ ಗ್ರಾಮದ ಜಾತ್ರೆಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಒಟ್ಟು 15 ಅಪರಾಧಿಗಳಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ

ತುಳುವಗೇರಾ ಗ್ರಾಮದ ಜಾತ್ರೆಯಲ್ಲಿ ಜಗದೀಶ ಹವಾಲ್ದಾರ ಹಾಗೂ ಅವರ ಸ್ನೇಹಿತರು ಪಿಪಿ ಹಾಗೂ ಬಲೂನಗಳನ್ನು ಖರೀದಿಸಿಕೊಂಡು ದುರುಗಮ್ಮ ಗುಡಿಯ ಹತ್ತಿರದಿಂದ ಸಾಗುತ್ತಿದ್ದ ವೇಳೆ, ನಾಗಪ್ಪ ಹುಂಡಿ ಮನೆ ಮುಂದೆ 17 ಜನ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಡಿಗೆ, ಕ್ರಿಕೆಟ್ ಸ್ಟಂಪ್, ಕಲ್ಲು ಹಾಗೂ ಖಾರದ ಪುಡಿ ಹಿಡಿದು ಜಗಳಕ್ಕೆ ಮುಂದಾಗಿದ್ದರು. ಈ ವೇಳೆ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮಲ್ಲಪ್ಪ ತಂದೆ ಮಲ್ಲಿಕಾರ್ಜುನ ಕಂದಕೂರ ಅವರನ್ನು ಕ್ರಿಕೆಟ್ ಸ್ಟಂಪ್ ಹಾಗೂ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಜೊತೆಗೆ ಜಗದೀಶ ಹವಾಲ್ದಾರ ಸೇರಿದಂತೆ ಇತರರಿಗೆ ತೀವ್ರ ಹಾಗೂ ಸಾಧಾರಣ ಗಾಯಗಳಾಗಿದ್ದವು. ಮಹಿಳಾ ಆರೋಪಿತರು ಖಾರದ ಪುಡಿ ಉಗ್ಗಿ ಜೀವ ಬೆದರಿಕೆ ಪ್ರಕರಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ ತೀರ್ಪು ಪ್ರಕಟಿಸಿ ಆರೋಪಿತರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು ರೂ. 4,12,500 ಗಳ ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತದಲ್ಲಿ ಶೇ.40 ಅಂದರೆ ರೂ. 1,65,000 ಗಳನ್ನು ಮೃತ ಮಲ್ಲಪ್ಪ ಅವರ ತಂದೆ-ತಾಯಿಗೆ ಪರಿಹಾರವಾಗಿ ನೀಡಲು ಹಾಗೂ ತೀವ್ರ ಗಾಯಗೊಂಡ ಶಿವಪ್ಪ ಕಂದಕೂರ ಅವರಿಗೆ ಶೇ.15 ಅಂದರೆ ರೂ. 62,000 ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಕಳಕಪ್ಪ ತಂದೆ ಬಾಳಪ್ಪ ಹುಂಡಿ, ದೊಡ್ಡಪ್ಪ ತಂದೆ ಬಾಳಪ್ಪ ಹುಂಡಿ, ನಾಗಪ್ಪ ತಂದೆ ಬಾಳಪ್ಪ ಹುಂಡಿ, ರಮೇಶ @ ಕೆಂಪಣ್ಣ ತಂದೆ ಕಳಕಪ್ಪ ಹುಂಡಿ, ಕೃಷ್ಣ ತಂದೆ ದೊಡ್ಡಪ್ಪ ಹುಂಡಿ, ಚಿದಾನಂದ ತಂದೆ ಹನುಮಪ್ಪ ಹುಂಡಿ, ಶರಣಪ್ಪ ಬಾಲಪ್ಪ ಹುಂಡಿ, ಬಸವರಾಜ ತಂದೆ ದೊಡ್ಡಪ್ಪ ಹುಂಡಿ, ಮಂಜುನಾಥ ತಂದೆ ಹನುಮಪ್ಪ ಹುಂಡಿ, ಅಮರಪ್ಪ ಬಾಲಪ್ಪ ಹುಂಡಿ, ನೀಲಪ್ಪ ತಂದೆ ಅಮರಪ್ಪ ಹುಂಡಿ, ಚಂದ್ರಶೇಖರ ತಂದೆ ದೊಡ್ಡಪ್ಪ ಹುಂಡಿ, ಯಮನೂರಪ್ಪ ತಂದೆ ಭೀಮಪ್ಪ ಹುಂಡಿ, ತಿಪ್ಪಣ್ಣ ತಂದೆ ಬಾಲನಗೌಡ ಮಾಲಿಪಾಟೀಲ ಹಾಗೂ ಮುತ್ತಪ್ಪ ತಂದೆ ಹನುಮಪ್ಪ ಹುಂಡಿ ಇವರ ವಿರುದ್ಧ ಆರೋಪಗಳು ಸಾಬೀತಾಗಿದ್ದು ಶಿಕ್ಷೆ ವಿಧಿಸಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಕೊಂತವ್ವ ಗಂಡ ದೊಡ್ಡಪ್ಪ ಹುಂಡಿ ಹಾಗೂ ರೇಣವ್ವ ಗಂಡ ನಾಗಪ್ಪ ಹುಂಡಿ, ಇವರ ಮೇಲಿನ ಆರೋಪ ಸಾಬೀತಾಗದ ಕಾರಣ ಅವರನ್ನು ಬಿಡುಗಡೆಗೊಳಿಸಲಾಗಿದೆ.

ಪ್ರಕರಣದ ತನಿಖೆಯನ್ನು ಸಿಪಿಐ ಸುರೇಶ್ ತಳವಾರ ನಡೆಸಿ, ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ವಾದ ಮಂಡಿಸಿದ್ದು, ಸಾಕ್ಷಿದಾರರನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಕುಷ್ಟಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹನುಮೇಶ ಜಗ್ಗಲ್ ಸಹಕರಿಸಿದ್ದಾರೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಎಂ.ಎ. ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯುತ್ತಮ ರಾಜ್ಯಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ,ಸಾಹಿತಿ ವೆಂಕಟರಾವ್ ಕುಲಕರ್ಣಿ ನಿಧನ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಅತ್ಯುತ್ತಮ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಸಾಹಿತಿ ವೆಂಕಟರಾವ್ ಕುಲಕರ್ಣಿ(೬೮)ಇವರು ವಯೋಸಹಜವಾಗಿ ವಿಜಯನಗರ ಕಾಲೋನಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ನರದ ಸಿಪಿಎಸ್ ಶಾಲೆ ಹಿರೇ ಜಂತಕಲ್ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿದ ವೆಂಕಟರಾವ್ ದಾಸ ಸಾಹಿತ್ಯದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು. ದಾಸಸಾಹಿತ್ಯದ ಕುರಿತು ಹಲವು ಕೃತಿಗಳನ್ನು ಬರೆದು ಮಂತ್ರಾಲಯದ ಪೂಜ್ಯ ಶ್ರೀಗಳಿಂದ ಬಿಡುಗಡೆಗೊಳಿಸಿದ್ದರು. ಕಾರುಣ್ಯ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು.2018 ರಲ್ಲಿ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದರು.ಸಂಘಸಂಸ್ಥೆಗಳು ಇವರಿಗೆ ಹಲವು ಪ್ರಶಸ್ತಿ ನೀಡಿ ಗೌರವಿಸಿವೆ.

ನಿವೃತ್ತಿಯ ನಂತರ ಅಂದಿನ ಶಾಸಕ ಪರಣ್ಣ ಮುನವಳ್ಳಿ ಅವರು ಸರಕಾರಿ ಜೂನಿಯರ್ ಕಾಲೇಜಿನ ಅಭಿನಂದನೆಗಳು ಸಮಿತಿಯ ಉಪಾಧ್ಯಕ್ಷರಾಗಿ ನೇಮಿಸಿದ್ದರು.ಇವರ ಅವರ ಅವಧಿಯಲ್ಲಿ ಜೂನಿಯರ್ ಕಾಲೇಜಿನ ಕೊಠಡಿಗಳ ನಿರ್ಮಾಣ ಕ್ಕೆ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ವಿಶೇಷ ಅನುದಾನ ಮಂಜೂರು ಮಾಡಿಸುವಲ್ಲಿ ವೆಂಕಟರಾವ್ ಕುಲಕರ್ಣಿ ಪ್ರಮುಖರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ಮಂಗಳವಾರ ಸಂಜೆ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಸಂತಾಪ: ನಿವೃತ್ತ ಶಿಕ್ಷಕ ವೆಂಕಟರಾವ್ ಕುಲಕರ್ಣಿ ನಿಧನಕ್ಕೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಲಿತಾರಾಣಿ ಶ್ರೀರಂಗದವರಾಯಲು,ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ, ಕೆ.ನಿಂಗಜ್ಜ, ರಾಮಮೂರ್ತಿ ನವಲಿ,ಎಸ್.ಎಂ.ಪಟೇಲ್, ಪ್ರಸನ್ನ ದೇಸಾಯಿ, ವಿ.ಎಸ್.ಪಾಟೀಲ್,ಸುದರ್ಶನ ವೈದ್ಯ,

ವಾಸುದೇವನವಲಿ, ಗಂಗಾವತಿ ತಾಲೂಕ ಬ್ರಾಹ್ಮಣ ಸಮಾಜ ಅಪಾರ ಶಿಷ್ಯಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ

134ನೇ ಬೆಟ್ಟದ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು

ಕಿಷ್ಕಿಂಧವಾಣಿ ಸುದ್ದಿ

 

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ 134ನೇ ಬೆಟ್ಟದ ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮಾರ್ಚ್-11 ರಂದು ಜರುಗಲಿದೆ.

ಮಾರ್ಚ್-10 ರಂದು 134ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಮಾರ್ಚ್-11 ಫಾಲ್ಗುಣ ಬಹುಳ ಅಷ್ಠಮಿ ಬುಧವಾರ ಬೆಳಗಿನ ಜಾವ 5:30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, 11:30 ರಿಂದ 12:30 ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ 5:00 ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ಜರುಗಲಿವೆ.

ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು,ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಗಾಲಿ ಜನಾರ್ಧನರೆಡ್ಡಿ,ಮಾಜಿ ಶಾಸಕ ಪರಣ್ಣ ಮುನವಳ್ಳಿ ಪಾಲ್ಗೊಳ್ಳಲಿದ್ದಾರೆ.

ಮಾ.

12 ರಂದು ಸಾಯಂಕಾಲ ಕಡುಬಿನ ಕಾಳಗ ನಡೆಯಲಿದೆ. ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಹಿರೇಬೆಣಕಲ್‌ನ ಭಕ್ತಾದಿಗಳು ವಿನಂತಿಸಿದ್ದಾರೆ.

ಪೈ ಮೆಡಿಕಲ್ ಅಕಾಡೆಮಿ ಪಿಯುಸಿ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ನಗರದ ಪೈ ಮೆಡಿಕಲ್ ಅಕಾಡೆಮಿಯ ಬಿಬಿಸಿ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ಎರಡು ದಿನಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳು ಭಾಗವಹಿಸಿದ ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆ (AI), ರೋಬೋಟಿಕ್ಸ್, ಡೋನ್ ಪ್ರದರ್ಶನ, 3D ಹೊಲೊಗ್ರಾಮ್, ರಕ್ತ ಹಾಗೂ ಸಕ್ಕರೆ ಕಾಯಿಲೆ ಪರೀಕ್ಷೆ, ತ್ಯಾಜ್ಯ ನಿರ್ವಹಣೆ, ನೀರಿನ ಶುದ್ದೀಕರಣ, ಫ್ರೀ ಎನರ್ಜಿ, ಹೈಡ್ರಾಲಿಕ್ ಬ್ರಿಡ್ಡ ( ಜಲಚಾಲಿತ ತಂತ್ರಜ್ಞಾನ ), ವಿವಿಧ ರಾಸಾಯನಿಕ ಕ್ರಿಯೆಗಳು, ಹೀಗೆಯೇ 30ಕ್ಕೂ ಹೆಚ್ಚು ಪ್ರದರ್ಶನಗಳು ಕಂಡುಬಂದವು.

ಮೊದಲನೆಯ ದಿನ ಪಾಲಕರು ಹಾಗೂ ಎರಡನೇ ದಿನ ಹಲವಾರು ಪ್ರೌಢಶಾಲೆಯ ವಿದ್ಯಾರ್ಥಿಗಳು ಬಂದು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಪೈ ಮೆಡಿಕಲ್ ಅಕಾಡೆಮಿಯ ಸಂಸ್ಥಾಪಕ ವಿನೋದ್ ಎಸ್ ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸೃಜನಶೀಲತೆ ಮತ್ತು ಸಂಶೋಧನಾ ಆಸಕ್ತಿಯನ್ನು ಪ್ರೇರೇಪಿಸುವ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮವಾಗಿದೆ. ಇದು ಪಠ್ಯಪುಸ್ತಕದ ಜ್ಞಾನವನ್ನು ಪ್ರಾಯೋಗಿಕ ಮಾದರಿಗಳ ಮೂಲಕ ಅನ್ವೇಷಿಸಲು, ಪರಿಸರ ಸಂರಕ್ಷಣೆ, ತಂತ್ರಜ್ಞಾನದ ಆವಿಷ್ಕಾರಗಳ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸಹ ಸಂಸ್ಥಾಪಕ ಗಾಂಧಿ ಕೆ, ಉಪ ಪ್ರಾಂಶುಪಾಲ ಸಂದೀಪ ನಾಯಕ ಹಾಗೂ ಎಲ್ಲಾ ಉಪನ್ಯಾಸಕರು ಇದ್ದರು.

ರಾಜಾ ಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರ ಅಭಿಮಾನಿಗಳ ಸಭೆ ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆಗೆ ನಿರ್ಧಾರ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಲು ಯೋಜನೆ

ಕಿಮ್ಮಿಂಧವಾಣಿ ಸುದ್ದಿ

 

ಗಂಗಾವತಿ: ಮಾಜಿ ಸಚಿವರು ಹಾಗೂ ಆನೆಗೊಂದಿ ರಾಜವಂಶಸ್ಥರಾದರಾಜಾ ಶ್ರೀರಂಗದೇವರಾಯಲು

 

ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಸತ್ಕರಿಸಲು ತೀರ್ಮಾನ ಕೈಗೊಳ್ಳಲಾಯಿತು.ರಾಜಾಶ್ರೀರಂಗದೇವರಾಯಲು ಕಂಚಿನ ಪುತ್ಥಳಿಯ ಸ್ಥಾಪನೆಗೆ ಶೀಘ್ರಅಭಿಮಾನಿಗಳ ಸಭೆ ಕರೆದು ತೀರ್ಮಾನಿಸಲಾಗುತ್ತದೆ ಎಂದು ಆನೆಗೊಂದಿಯ ಹಿರಿಯ ಮುಖಂಡರಾದ ಹಂಪಿ ಹನುಮಂತಯ್ಯ ಹೇಳಿದರು.

 

ಸಾವಯವ ಕೃಷಿ ಕೇಂದ್ರದಲ್ಲಿ ರಾಜಾ ಅವರು ತಾಲೂಕಿನ ತಿರುಮಲಾಪೂರದ

 

ಶ್ರೀರಂಗದೇವರಾಯಲು ಪ್ರತಿಷ್ಠಾನ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದರು.

 

ಶ್ರೀರಂಗದೇವರಾಯಲು ಜನಸಾಮಾನ್ಯರ ರಾಜಕಾರಣಿಯಾಗಿದ್ದರು. ಅವರ ಹೆಸರಿನಲ್ಲಿ ಮತ್ತು ಅವರ ಕುಟುಂಬಸ್ಥರು, ಅಭಿಮಾನಿಗಳ ನೇತೃತ್ವದಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಸಾಮಾಜಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜನೆ ಮಾಡಬೇಕು. ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಸಾಧಕರು, ಲೇಖಕರನ್ನು ಪ್ರತಿ ವರ್ಷ ಸತ್ಕರಿಸಬೇಕು.

 

ವೈಚಾರಿಕ ಮತ್ತು ಜನೋಪಯೋಗಿ ಯೋಜನೆಗಳ ಕುರಿತು ಶ್ರೀರಂಗದೇವರಾಯಲು ಅವರಿಗಿದ್ದ ಕಳಕಳಿಯನ್ನು ಕಾರ್ಯಕ್ರಮ ರೂಪದಲ್ಲಿ

 

ಅನುಷ್ಠಾನ ಮಾಡಬೇಕು. ತುಂಗಭದ್ರಾ ಡ್ಯಾಂ ಕಾಲುವೆಗಳ ಕುರಿತು ಮತ್ತು ವಿಶೇಷವಾಗಿ ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿಗಾಗಿ

 

ಮೂಲಕ ಶ್ರೀರಂಗದೇವರಾಯಲು ಇನ್ನೂ ಜನಮಾನಸದಲ್ಲಿದ್ದು ಅವರ ಕಾರ್ಯಗಳನ್ನು ಪ್ರತಿಷ್ಠಾನಗಳ ಮೂಲಕ ಅನುಷ್ಟಾನ ಮಾಡಲು ತೀರ್ಮಾನಿಸಾಗಿದೆ ಎಂದರು.

 

ಹಲವು ಭಾರಿ ಮುಖ್ಯಮಂತ್ರಿಗಳಿಗೆ ಅವರು ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಶಾಶ್ವತ ದುರಸ್ತಿ ಕಾರ್ಯಗಳಾಗಿದ್ದು ಅವರಿದ್ದ ನೀರಾವರಿ ಕಾಳಜಿ ಮತ್ತು ಬಡವರಿಗೆ ಮನೆಗಳ ನಿರ್ಮಾಣ ಮತ್ತು ಆನೆಗೊಂದಿ ಉತ್ಸವ ಹಾಗೂ ತಳವಾರ ಘಟ್ಟ ಸೇತುವೆ ಕನಸು ಹೀಗೆ ಹಲವು ಜನಪರವಾದ ಯೋಜನೆಗಳನ್ನು ಮತ್ತು ಗಂಗಾವತಿಯಲ್ಲಿ ಕೃಷಿ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ, ಬೃಹತ್ ಬಸ್ ನಿಲ್ದಾಣ, 100 ಹಾಸಿಗೆ ಸರಕಾರಿ ಆಸ್ಪತ್ರೆ, ಮಿನಿವಿಧಾನಸೌಧ ಹೀಗೆ ಹಲವು ಕಾರ್ಯಗಳ

 

ಸಭೆಯಲ್ಲಿ ರಾಜವಂಶಸ್ಥರಾದ ಲಲಿತಾರಾಣಿ ಶ್ರೀರಂಗದೇವರಾಯಲು, ಟಿ.ಸತ್ಯನಾರಾಯಣ, ಪತ್ರಕರ್ತರಾದ ಕೆ.ಮಲ್ಲಿಕಾರ್ಜುನ ಸಾಣಾಪೂರ, ಕೆ.ನಿಂಗಜ್ಜ, ಮುಖಂಡರಾದ ಕೆ.. ತಿರುಕಪ್ಪ, ಟಿ.ಜಿ.ಬಾಬು, ವೈರಮೇಶ, ನರಸಿಂಹಲು. ಕೆ. ವೆಂಕಟೇಶ. ಇಲ್ಲೂರು ರಾಮಕೃಷ್ಣ, ಚಂದ್ರಣ್ಣ, ಯುವರಾಜ,ನಟ ವಿಷ್ಣುಜೋಶಿ ಆದಾಪೂರ, ಶಿವಚ್ಯು, ಬಾಳೆಕಾಯಿ ತಿಮ್ಮಪ್ಪ,ಕೆ.ಪವನಕುಮಾರ ಸೇರಿ ಆನೆಗೊಂದಿ ಭಾಗದ ಮುಖಂಡರಿದ್ದರು

ಮರಕುಂಬಿ ಪ್ರಕರಣದ ಮುಂಚೂಣಿ ನಾಯಕ ನಿತ್ಯಾನಂದ ಸ್ವಾಮಿ ನಿಧನ ನುಡಿ ನಮನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ಮುರುಕುಂಬಿಯ ಅಸ್ಪೃಶ್ಯರ ಮೇಲಿನ ದೌರ್ಜನ ಖಂಡಿಸಿ ನಡೆದ ದಶಕಗಳ ಹೋರಾಟದ ಮುಂಚೂಣಿ ನಾಯಕರಾಗಿದ್ದ ಸಿಪಿಐಎಂ ಪಕ್ಷದ ನಿತ್ಯಾನಂದ ಸ್ವಾಮಿ ಅವರು ಭೂಮಿ ಚಳವಳಿ ಸೇರಿದಂತೆ ಗಂಗಾವತಿಯ ಪ್ರಮುಖ ಚಳುವಳಿಯಲ್ಲಿ ಹೋರಾಟದ ನೆನಪುಗಳು ಜೀವಂತವಾಗಿವೆ ಎಂದು ಸಿಐಟಿಯು ರಾಜ್ಯ ಮುಖಂಡ ಎಂ ನಿರುಪಾದಿ ಬೆಣಕಲ್ ಹೇಳಿದರು ಅವರು ಸಿಪಿಐಎಂ ಕಚೇರಿಯಲ್ಲಿ ನಿತ್ಯಾನಂದ ಸ್ವಾಮಿ ಅವರ ನುಡಿನಮನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಿತ್ಯಾನಂದ ಸ್ವಾಮಿ ವಯೋ ಸಹಜ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಿಪಿಐಎಂ ಪಕ್ಷವು ಹಮ್ಮಿಕೊಳ್ಳುವ ಎಲ್ಲಾ ಹೋರಾಟಗಳಲ್ಲಿ ಭಾಗವಹಿಸಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ನ್ಯಾಯವನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.

ಸಿಪಿಐಎಂ ಪ್ರಧಾನ ಕಾರ್ಯಾಲಯದಲ್ಲಿ ಮತ್ತು ಎಪಿಎಂಸಿ ಗಂಜ್ ಕಾರ್ಯಲಯದಲ್ಲಿ ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸುವುದರ ಮೂಲಕ ಗೌರವ ಸಲ್ಲಿಸಿ ಸಂತಾಪವನ್ನು ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐಎಂ ನಾಯಕರುಗಳಾದ ಎಂ.ನಿರುಪಾದಿ ಬೆಣಕಲ್, ಬಸವರಾಜ್ ಮರಕುಂಬಿ, ಹುಸೇನಪ್ಪ,

ಗಂಜ್ ಹಮಾಲರ ಸಂಘದ ಕಾರ್ಯದರ್ಶಿ ಕೃಷ್ಣನಾಯಕ ಸೇರಿದಂತೆ ಅನೇಕರಿದ್ದರು