Breaking News
ಗಂಗಾವತಿ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಯಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ!

*ಪುಡಾರಿಗಳ ಅಡ್ಡ ಆಗಿರುವ ಕೇಂದ್ರ ಬಸ್ ನಿಲ್ದಾಣ. 

*ನಿತ್ಯವೂ ಪ್ರಯಾಣಿಕರು,ವ್ಯಾಪಾರಿಗಳ ಮೇಲೆ ನಿಶಾಚರಿಗಳಿಂದ ಹಲ್ಲೆ, ದೌರ್ಜನ್ಯ.

*ಒಂದು ವರ್ಷದಿಂದ ಕೆಟ್ಟು ನಿಂತಿರುವ ಬಸ್ ನಿಲ್ದಾಣದ ಸಿಸಿ ಕ್ಯಾಮರಾಗಳು.

*ರಾತ್ರಿ ವೇಳೆ ನಗರದ ವಿವಿಧ ಸರ್ಕಲ್ ಗಳ ಪುಡಾರಿ ಯುವಕರಿಂದ ಗುಂಡು ಪಾರ್ಟಿ

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ: ದುಷ್ಕರ್ಮಿಯೊರ್ವ ವಿನಾಕಾರಣ ವ್ಯಕ್ತಿಯೊಬ್ಬರ ಮೇಲೆ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ತಲೆ ಮತ್ತು ಎಡ ಭಾಗದ ಕಣ್ಣು, ಕಿವಿಗೆ ತೀವ್ರ ಗಾಯವಾದ ಪ್ರಕರಣ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಮಧ್ಯ ರಾತ್ರಿ ಜರುಗಿದೆ.

ಗಂಗಾವತಿ ಜೆಸ್ಕಾಂ ಕಚೇರಿಯ ನಿವೃತ್ತ ಲೈನ್ ಮ್ಯಾನ್ ಶಿವಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಳಿತಿರುವ ಸಂದರ್ಭದಲ್ಲಿ ದುಷ್ಕರ್ಮಿ ಒಬ್ಬ ಆಗಮಿಸಿ ವಿನಾಕಾರಣ ಜಗಳ ತೆಗೆದು ಕಲ್ಲಿನಿಂದ ತಲೆ ಮತ್ತು ಎಡ ಭಾಗದ ಕಣ್ಣು ಕಿವಿಗೆ ಹೊಡೆದಿದ್ದರಿಂದ ದೂರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಪುಡಾರಿಗಳ ಅಟ್ಟಹಾಸ ಹೆಚ್ಚಾಗಿದ್ದು ನಿತ್ಯವೂ ಪ್ರಯಾಣಿಕರು ಮತ್ತು ಸಾರ್ವಜನಿಕರ ಮೇಲೆ ಮತ್ತು ವ್ಯಾಪಾರಿಗಳ ಮೇಲೆ ದೌರ್ಜನ್ಯ ಗುಂಡಾಗಿರಿ ವ್ಯಸಗುವ ಗುಂಪು ಕೆಲಸ ಮಾಡುತ್ತಿದೆ. ಜೊತೆಗೆ ನಗರದ ವಿವಿಧ ಸರ್ಕಲ್ ಗಳಲ್ಲಿ ಮಧ್ಯರಾತ್ರಿ ಪುಡಾರಿಗಳು ಮಧ್ಯಪಾನ ಸೇವನೆ ಮಾಡಿ ಪ್ರಯಾಣಿಕರು, ಸಾರ್ವಜನಿಕರು ಮತ್ತು ವಾಹನ ಸವಾರರ ಮೇಲೆ ಹೊಡಿಬಡಿ ಮಾಡುತ್ತಿದ್ದಾರೆ.

ಕೆಟ್ಟು ನಿಂತ ಸಿ.ಸಿ. ಕ್ಯಾಮರಾಗಳು: ಕೇಂದ್ರ ಬಸ್ ನಿಲ್ದಾಣಕ್ಕೆ ನಿತ್ಯವೂ ಸಾವಿರಾರು ಪ್ರಯಾಣಿಕರು ಸಾರ್ವಜನಿಕರು ಭೇಟಿ ನೀಡುತ್ತಾರೆ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆ. ಎಸ್. ಆರ್. ಟಿ.ಸಿ ಕ್ಯಾಮರಗಳನ್ನು ಅಳವಡಿಸಿದ್ದು ಕಳೆದ ಒಂದು ವರ್ಷದಿಂದ ಸಿಸಿ ಕ್ಯಾಮರಗಳು ಕೆಟ್ಟು ನಿಂತಿವೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಿ.ಸಿ.ಕ್ಯಾಮೆರಾ ಗಳು ಇರುವ ಜಾಗದಲ್ಲಿ ವಿದ್ಯುತ್ ತೊಂದರೆ ಇದ್ದು ಕಳೆದ ಕೆಲವು ದಿನಗಳಿಂದ ಸಿ.ಸಿ. ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ.ದುರಸ್ತಿ ಮಾಡಿಸಲಾಗುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ದುಷ್ಕರ್ಮಿ‌ ಬಂಧನಕ್ಕೆ ಕ್ರಮ: ಕೇಂದ್ರ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೋರ್ವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ದುಷ್ಕರ್ಮಿಯ ಕುರಿತು ಪೊಲೀಸ್ ಇಲಾಖೆಯ ಶ್ರೀ ಕೃಷ್ಣದೇವರಾಯ ವೃತ್ತದ ಸಿ ಸಿ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದ್ದು ದುಷ್ಕರ್ಮಿಯನ್ನು ಶೀಘ್ರದಲ್ಲೇ ಬಂದಿಸಲಾಗುತ್ತದೆ ಎಂದು ನಗರ ಪೊಲೀಸ್ ಠಾಣೆಯ ಸಿ. ಪಿ. ಐ. ಪ್ರಕಾಶ ಮಾಳೆ ತಿಳಿಸಿದ್ದಾರೆ.

 

ದಲಿತ ಸಾಹಿತ್ಯ ಪರಿಷತ್ ನಿಂದ ಅಕ್ಷದ ಅವ್ವ ಸಾವಿತ್ರಿ ಬಾಯಿಪುಲೆ ಪ್ರಶಸ್ತಿ ಪ್ರದಾನ ಶೋಷಿತರು, ದಮನಿತರ ಸಾಹಿತ್ಯದ ಧ್ವನಿಯಾಗಿ ದಸಾಪ ಕಾರ್ಯ ನಿರ್ವಹಿಸುತ್ತಿದೆ:ಡಾ.ಗೊಳಸಂಗಿ *ದಸಾಪದಿಂದ ಪ್ರಥಮ ಮಹಿಳಾ ಶಿಕ್ಷಕಿಯರಾದ ಸಾವಿತ್ರಿ ಬಾಯಿಪುಲೆ, ಫಾತೀಮಾ ಶೇಖ್ ಜಯಂತಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಶೋಷಿತರು, ದಮನಿತರು ಹಾಗೂ ಅವಕಾಶ ವಂಚಿತ ಸಾಹಿತ್ಯ ಕೃಷಿ ಮಾಡುವವರಿಗಾಗಿ ಮತ್ತು ಸಂವಿಧಾನದ ಆಶಯಗಳನ್ನು ಅನುಷ್ಠಾಗೊಳಿಸಲು ದಲಿತ ಸಾಹಿತ್ಯ ಪರಿಷತ್ ಕಳೆದ 30 ವರ್ಷಗಳಿಂದ ನಿರಂತರವಾಗಿ ಕಾರ್ಯ ಮಾಡುತ್ತಿದೆ ಎಂದು ಪರಿಷತ್ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಹೇಳಿದರು.
ಅವರು ನಗರದ ಐಎಂಎ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತ್ಯವು ಕೆಲವೇ ಜನರಿಗೆ ಸೀಮೀತ ಎನ್ನುವ ವಾತಾವರಣ ಸೃಷ್ಠಿಯಾಗಿದ್ದ ಸಂದರ್ಭದಲ್ಲಿ ದಸಾಪ ಅಸ್ತಿತ್ವಕ್ಕೆ ಬಂದಿದ್ದು ದಲಿತರು, ಶೋಷಿತ ಮತ್ತು ಹಿಂದುಳಿದ ವರ್ಗದವರ ಸಾಹಿತ್ಯ ಕೃಷಿಯನ್ನು ಪ್ರೋತ್ಸಾಹಿಸುತ್ತಿದ್ದು ಪುಸ್ತಕ ಪ್ರಕರಟಣೆ, ಸಾಹಿತ್ಯ ಸಮ್ಮೇಳನ, ಕಾರ್ಯಾಗಾರ ಮತ್ತು ಸಾಹಿತ್ಯ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮೊಟ್ಟ ಮೊದಲ ಭಾರಿಗೆ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಗದುಗಿನ ಪೂಜ್ಯ ತೋಂಟದಾರ್ಯ ಶ್ರೀಗಳ ಸಹಕಾರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಲಾಯಿತು. ಅಂದಿನಿಂದ ಸರಕಾರಕ್ಕೆ ಜನವೇರಿ 03 ರಂದು ಸಾವಿತ್ರಿ ಬಾಯಿ ಪುಲೆ ಜಯಂತಿ ಆಚರಣೆ ಮಾಡುವಂತೆ ಸರಕಾರಕ್ಕೆ ಮನವಿ ಕೊಡಲಾಗಿತ್ತು.2014 ರಿಂದ ಸರಕಾರ ಸಾವಿತ್ರಿ ಬಾಯಿ ಪುಲೆ ಜಯಂತಿಯನ್ನು ಸರಕಾರಿ ಕಾರ್ಯಕ್ರಮವಾಗಿ ಆದೇಶ ಮಾಡಿದೆ. ನಂತರ ಇದೀಗ ಪ್ರಥಮ ಶಿಕ್ಷಕಿಯಾಗಿ ಕೆಲಸ ಮಾಡಿದ ಫಾತೀಮಾ ಶೇಖ್ ಇವರ ಜಯಂತಿಯನ್ನು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಾವಿತ್ರ ಬಾಯಿ ಪುಲೆ ಮತ್ತು ಫಾತೀಮಾ ಶೇಖ್ ಇವರ ಹೆಸರಿನಲ್ಲಿ ಶಿಕ್ಷಕಿ
ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕಾಂಗ್ರೆಸ್ ಮಹಿಳಾ ರಾಜ್ಯ ಮುಖಂಡರಾದ ಶೈಲಜಾ ಹಿರೇವ್ಮಠ ಮಾತನಾಡಿ, ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಭಿ ಜೀವನಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದ್ದು ಸಾವಿತ್ರಿ ಬಾಯಿ ಪುಲೆ ಅವರು ಅಂದಿನ ಸಂಪ್ರದಾಯವಾದಿಗಳ ವಿರೋಧದ ಮಧ್ಯೆ ಮಹಿಳೆಯರಿಗೆ ಶಿಕ್ಷಣ ಕೊಡುವ ಮಹತ್ವದ ಕಾರ್ಯ ಮಾಡಿದರು. ಮಹಿಳೆಯರು ಮೂಡನಂಬೀಕೆ ಮತ್ತು ಕೆಟ್ಟ ಸಂಪ್ರದಾಯಗಳನ್ನು ಬಿಟ್ಟು ಶಿಕ್ಷಣ ಪಡೆಯುವ ಮೂಲಕ ಸರ್ವ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದು ಇವರ ಸಂಖ್ಯೆ ಹೆಚ್ಚಾಗಬೇಕು. ಸಾವಿತ್ರ ಬಾಯಿ ಪುಲೆ ಅವರ ಜೀವನ ಪ್ರತಿ ಮಹಿಳೆಗೂ ಆದರ್ಶವಾಗಬೇಕು ದೇಶದಲ್ಲಿ ಹೆಣ್ಣು ಮಕ್ಕಳ ಸಂರಕ್ಷಣೆಯ ಮಾತುಗಳನ್ನಾಡುತ್ತಲೇ ನಿತ್ಯವೂ ಆತ್ಯಾಚಾರ, ಅನಾಚಾರಗಳಂತಹ ಪ್ರಕರಣ ಹೆಚ್ಚು ನಡೆಯುತ್ತಿವೆ.ಎಫ್‌ಸ್ಟೀನ್ ಫೈಲ್ ನಂತಹ ಪ್ರಕರಣದಿಂದ ಇಡೀ ವಿಶ್ವವೇ ಕಳವಳಗೊಳ್ಳುವ ಸ್ಥಿತಿ ಬಂದಿದೆ ಎಂದರು.
ಹಿರಿಯ ಹೋರಾಟಗಾರ ಜೆ.ಭಾರದ್ವಾಜ್, ಭಾಗ್ಯವಂತಪ್ಪ, ಕನಕಪ್ಪ ಚಿತ್ರಗಾರ, ಶಿವಪ್ಪ ಜಾಗೋಗೋರ್, ಮಹಮದ್ ರಫಿ, ವಿರೇಶ ಎಂ ಅಂಗಡಿ, ಸೋಮಶೇಖರಗೌಡ, ಆಶಾ ಅಗಸಿಮನಿ,ಹನುಮಂತಪ್ಪ ಚಳ್ಳೂರು,ಸೋಮಪ್ಪ,ಗಫೂರ ಸಾಬ,ಮಂಜುನಾಥ ಹೊಸಮನಿ,ವೆಂಕಪ್ಪ,ಶಶಿಕಲಾ ಚೌಹಾಣ್,ನಟರಾಜ್, ನಾಗಮ್ಮ ನಾಯಕ,ಮೋಜೆಸ್ ಪೌಲ್,ಕವಿತಾ, ಎಂ.ಶ್ರೀದೇವಿ ಇವರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗಣ್ಣ ಜಂಗಮರಳ್ಳಿ,ತಾಲೂಕು ಅಧ್ಯಕ್ಷ ಛತ್ರಪ್ಪ ತಂಬೂರಿ,ಪ್ರಮುಖರಾದ ರಮೇಶ ಗಬ್ಬೂರು,ಕೆ.ನಿಂಗಜ್ಜ,ಡಾ.ಜಾಜಿ ದೇವೆಚಿದ್ರಪ್ಪ, ಡಾ.ಶರಣಬಸಪ್ಪ ಕೋಲ್ಕಾರ್,ಅಜಮೀರ್ ನಂದಾಪೂರ,ಡಿಡಿಪಿಐ ಸೋಮಶೇಖರಗೌಡ,ಬಿಇಒ ನಟೇಶ, ಪ್ರಕಾಶ ರಾಠೋಡ್, ಡಾ.ಶಿವಕುಮಾರ ಮಾಲೀಪಾಟೀಲ್,ರುದ್ರೇಶ ಮಡಿವಾಳ, ಶಿವಶಂಕರ ಕಲ್ಮಠ,ಮೈಲಾರಪ್ಪ ಬೂದಿಹಾಳ, ಶ್ರೀನಿವಾಸ ಉಪ್ಪಾರ, ಸುಂಕಪ್ಪ, ಪದ್ಮಾವತಿ, ರಮೇಶ ಬನ್ನಿಕೊಪ್ಪ, ಗುರುಪ್ರಸಾದ, ಚಂದ್ರಶೇಖರ ಸೇರಿ ಅನೇಕರಿದ್ದರು.

ಕುಟುಂಬದ ಏಳ್ಗೆ, ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ: ಪದ್ಮವಿಠ್ಠಲ್  *ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ದಿನಾಚರಣೆ

ಕಿಷ್ಕಿಂಧವಾಣಿ ಸುದ್ದಿ

ಹಗರಿಬೊಮ್ಮನಹಳ್ಳಿ: ಕುಟುಂಬದ ಏಳ್ಗೆ ಮತ್ತು ಭವಿಷ್ಯವನ್ನು ಮಹಿಳೆಯರು ನಿರ್ಧರಿಸುತ್ತಾರೆ. ಆದ್ದರಿಂದ ಮಹತ್ವದ ವಿಷಯಗಳನ್ನು ಪುರುಷರು

ಮಹಿಳೆಯರ ಹತ್ತಿರ ಚರ್ಚಿಸುವುದು ಅಗತ್ಯವಾಗಿದೆ ಎಂದು ಸಂಘಪರಿವಾರದ ಹಿರಿಯರಾದ ಪದ್ಮವಿಠಲ್ ಹೇಳಿದರು.

ರಾಷ್ಟ್ರೋತ್ಥಾನ ಸಭಾಂಗಣದಲ್ಲಿ ಸರಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಉದ್ಘಾಟಿಸಿದರು

ಪ್ರಸಕ್ತ ದಿನಗಳಲ್ಲಿ ಮಹಿಳೆ ನೌಕರಿಯ ಜೊತೆಗೆ ಕುಟುಂಬ ಪಾಲನೆಯ ಹೊರೆ ಹಾಗೂ ಜವಾಬ್ದಾರಿ ಮಹತ್ತರವಾಗಿದೆ ಮಕ್ಕಳನ್ನು ಬೆಳೆಸುವ ಹೊಣೆಗಾರಿಕೆಯೂ ಆಕೆಯ ಮೇಲಿದೆ.

ಕುಟುಂಬವನ್ನು ಆರ್ಥಿಕವಾಗಿ ಬಲಿಷ್ಠ ಗೊಳಿಸಲು ಮಹಿಳೆಯು ಉದ್ಯೋಗಸ್ಥಿಯಾಗುವುದು ಅನಿವಾರ್ಯವಾಗಿದೆ ಎಂದರು.

ಪ್ರಸ್ತಾವಿಕವಾಗಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂಪಿಎಂ ಮಂಜುನಾಥ ಮಾತನಾಡಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಪೌರಕಾರ್ಮಿಕ ಮಹಿಳೆಯರ ವಸೇವೆ ಯನ್ನು ಗುರುತಿಸಿ ಈ ವರ್ಷ ಸನ್ಮಾನಿಸುತ್ತಿರುವುದು ಸಂಘದ ಹೆಮ್ಮೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ನಾಗರತ್ನ ವೈ ಇಟಗಿ, ಸಂಘದ ಪದಾಧಿಕಾರಿಗಳಾದ ಆರ್. ಜಯಶ್ರೀ, ಅರ್ಪಿತ ಆನಂದ್, ಗಾಳೆಮ್ಮ. ಸಾವಿತ್ರಿ ಬಾಯಿಪುಲೆ ಶಿಕ್ಷಕಿಯರ ಸಂಘದ ದೀಪಿಕಾ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜೆ.ಎಂ. ಜ್ಯೋತೇಶ್ವರಿ. ತಾಲೂಕು ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಗೌರಮ್ಮ ಆಯುಷ್ಯ ಡಾ. ಹಾಲಮ್ಮ, ಎಂ. ಯಂಕ ರೆಡ್ಡಿ. ಹಂಸಾಗರದ ಆನಂದ,ಆಂಜನೇಯ, ಸೋಮಶೇಖರ್,

ಎನ್ ಮಂಜುನಾಥ, ಸದಸ್ಯ ರಾಜು ಸೋಗಿ, ಸೊನ್ನದ ಕೊಟ್ರೇಶ್, ಹೆಚ್ ಲೋಕಪ್ಪ, ಗುಲ್ಜಾರ್ ಬೇಗಮ್, ನಾಗಲಕ್ಷ್ಮಿ, ಕೆಎಂ ನಿರ್ಮಲ,ಭಾರತಿ. ಪ್ರಮೋದಿನಿ, ಕವಿತಾ, ಉಷಾರಾಣಿ,ಖಾಜಾ ಬೂನ, ಶಾಂತಕುಮಾರಿ, ಶೋಭಾ, ಶಾರದಾ ಇದ್ದರು.

ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿಸುವಂತೆ ಗ್ರಾಮಸ್ಥರಿಂದ ಪಾದಯಾತ್ರೆ ಪ್ರತಿಭಟನೆ. * ಕಂದಾಯ ನಿರೀಕ್ಷಕನಿಂದ ಅವಜ್ಞಾನಿಕ ವರದಿ ತಿರಸ್ಕರಿಸುವಂತೆ ಒತ್ತಾಯ.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ತಾಲೂಕಿನ ಬಸವನದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡುವಂತೆ ಆಗ್ರಹಿಸಿ ಬಸವನದುರ್ಗ ಗ್ರಾಮಸ್ಥರು ತಮ್ಮ ಗ್ರಾಮದಿಂದ ಗಂಗಾವತಿಯ ತಹಸೀಲ್ ಕಚೇರಿವರೆಗೆ ಪಾದಯಾತ್ರೆ ನಡೆಸಿ ಸರಕಾರವನ್ನು ಒತ್ತಾಯಿಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ಕೆ. ವಿ. ವೆಂಕಟೇಶ ಬಾಬು ಮಾತನಾಡಿ, ಬಸವನದುರ್ಗ ಗ್ರಾಮ ಕಳೆದ 50 ವರ್ಷಗಳಿಂದ ಅಸ್ತಿತ್ವದಲ್ಲಿದ್ದು ಇಲ್ಲಿ ಕೂಲಿ ಕಾರ್ಮಿಕರು, ಬಡವರು, ರೈತರು, ಸರ್ಕಾರಿ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದಾರೆ. ರಾಜ್ಯ ಸರ್ಕಾರ ಹಟ್ಟಿ, ಕ್ಯಾಂಪು,ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕುರಿತು ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಜಿಲ್ಲಾಡಳಿತಕ್ಕೆ ವರದಿಯನ್ನು ಕಳಿಸುವಾಗ ಆನೆಗೊಂದಿ ಭಾಗದ ಕಂದಾಯ ನಿರೀಕ್ಷಕ ಬಷೀರ್ ಅಹಮದ್ ಎನ್ನುವ ಅಧಿಕಾರಿ ಬಸವನ ದುರ್ಗದ ಬಗ್ಗೆ ತಪ್ಪು ಮಾಹಿತಿಯನ್ನು ಕಳಿಸಿದ್ದರಿಂದ ಈ ಭಾರಿ ಬಸವನದುರ್ಗ ಕಂದಾಯ ಗ್ರಾಮವಾಗಿ ಮಾರ್ಪಡಲು ಸಾಧ್ಯವಿಲ್ಲ, ಆದ್ದರಿಂದ ಅಧಿಕಾರಿಯ ಅವೈಜ್ಞಾನಿಕ ವರದಿಯನ್ನು ತಿರಸ್ಕಾರ ಮಾಡಿ, ಪುನಃ ವರದಿ ಪಡೆದು ಇದೇ ವರ್ಷದಲ್ಲಿ ಬಸವನ ದುರ್ಗವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು. ಇಲ್ಲದಿದ್ದರೆ ನಿರಂತರವಾಗಿ ಗ್ರಾಮದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹುಲಿಗೆಮ್ಮ ಹೊನ್ನಪ್ಪ ನಾಯಕ,  ಗ್ರಾ.ಪಂ.ಮಾಜಿ  ಸದಸ್ಯ ರಾಜಶೇಖರ, ರಾಮಕೃಷ್ಣ ನಾಯಕ,  ಯಮನಪ್ಪ, ಲೈಂದರ್,  ಸಲೀಂ ಪಾಷಾ,  ಎ.ರಮೇಶ,  ಶ್ರೀನಿವಾಸ ರೆಡ್ಡಿ, ನಾಗೆರೆಡ್ಡಿ,  ಗೋಪಾಲ್ ರೆಡ್ಡಿ,  ಜಗದೀಶ, ಮಂಜುನಾಥ ಜಂಗರ,   ವೇಣುಗೋಪಾಲ,  ಎ. ರವಿ,  ರಾಮನಗೌಡ, ರಂಗಪ್ಪ , ಅಂಬರೀಶ, ಸುಗಪ್ಪ , ಬೇಗಮ್ಮ, ರೇಣಮ್ಮ, ದುರ್ಗಮ್ಮ, ಯಮನಮ್ಮ ಸೇರಿದಂತೆ ಅನೇಕರಿದ್ದರು.

ಪತ್ರಿಕಾ ವಿಭಾಗದ ಯುವವಾಣಿ, ಕಾಲೇಜುರಂಗ ಪತ್ರಿಕೆ ಬಿಡುಗಡೆ ಎಸ್‌ಕೆಎನ್‌ಜಿಕಾಲೇಜು ಪತ್ರಿಕಾವಿಭಾಗದಲ್ಲಿ ಡಿಜಿಟಲ್ ಸ್ಟುಡಿಯೋ ಸ್ಥಾಪನೆೆ:ಜಿ.ಜನಾರ್ದನರೆಡ್ಡಿ *ಅಭಿವೃದ್ಧಿ ಪತ್ರಿಕೋದ್ಯಮಕ್ಕೆ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು.

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಪತ್ರಿಕೋದ್ಯಮದ ವಿದ್ಯಾರ್ಥಿಗಳು ಧನಾತ್ಮಕ ವರದಿಗಾರಿಕೆಗೆ ಆದ್ಯತೆ ನೀಡಬೇಕು.ಅಭಿವೃದ್ಧಿಗೆ ಪೀಠಿಕೆಯಾಗಿ ಪತ್ರಕರ್ತರು ಕಾರ್ಯ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರಣೀಕರ್ತರಾಗಬೇಕು. ಸ್ಥಳೀಯ ಎಸ್‌ಕೆಎನ್‌ಜಿ ಕಾಲೇಜಿನಲ್ಲಿ ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ ವಿಭಾಗವಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ನಿಧಿಯಿಂದ ಅನುದಾನ ಒದಗಿಸಿ ಡಿಜಿಟಲ್ ಸ್ಟುಡಿಯೋ ಸ್ಥಾಪಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಅವರು ನಗರದ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹೊರಗೆ ತಂದಿರುವ ಯುವವಾಣಿ ಮತ್ತು ಕಾಲೇಜು ರಂಗ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ರಂಗ ಸಾರ್ವಜನಿಕ ಅಭಿಪ್ರಾಯ ಮತ್ತು ಸಂವಿಧಾನಾತ್ಮಕ ಕಾರ್ಯಗಳು ನಡೆಯುವಂತೆ ಮಾಡುತ್ತದೆ. ಸರಕಾರ ದಾರಿ ತಪ್ಪಿದ ಸಂದರ್ಭದಲ್ಲಿ ವರದಿ ಮತ್ತು ಲೇಖನ ಪ್ರಕಟಣೆಯ ಮೂಲಕ ಸರಿದಾರಿಗೆ ತರುವ ಮಹಾನ್ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪ್ರಸ್ತುತ ಪತ್ರಿಕೋದ್ಯಮ ಓದುವವರಿಗೆ ವಿಫುಲವಾದ ಉದ್ಯೋಗ ಅವಕಾಶಗಳಿವೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಬೇಕಾಗುವ ಪುಸ್ತಕಗಳನ್ನು ಕರ್ನಾಟಕ ಮಾದ್ಯಮ ಅಕಾಡೆಮಿ ವತಿಯಿಂದ ರಿಯಾಯಿತಿ ದರದಲ್ಲಿ ಖರೀದಿಸಿ ಕೊಡಲಾಗುತ್ತದೆ. ಕಾಲೇಜಿನಲ್ಲಿ ಮಹಿಳಾ ಶೌಚಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ನೂತನವಾಗಿ ಕಾಲೇಜು ಅಭಿವೃದ್ಧಿ ಕಮೀಟಿ ರಚನೆಯಾಗಿದ್ದು ಕಮೀಟಿ ಸರಿಯಾಗಿ ಕಾರ್ಯ ಮಾಡಲಿದೆ ಎಂದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ.ನಿಂಗಜ್ಜ ಮಾತನಾಡಿ, ಪತ್ರಿಕೋದ್ಯಮ ಪ್ರಸ್ತುತ ಹೆಚ್ಚು ಉದ್ಯೋಗ ಕಲ್ಪಿಸುವ ಕ್ಷೇತ್ರವಾಗಿದ್ದು ಹೆಚ್ಚು ವಿದ್ಯಾರ್ಥಿಗಳು ಪತ್ರಿಕೋದ್ಯಮ ಓದಲು ಬರಬೇಕು. ಅಕಾಡೆಮಿಯಿಂದ ಪ್ರಕಟಗೊಂಡಿರುವ ಅನೇಕ ಹಿರಿಯ ಪತ್ರಕರ್ತರು ಬರೆದು ಪುಸ್ತಕಗಳು ಲಭ್ಯವಿದ್ದು ರಿಯಾಯಿತಿ ದರದಲ್ಲಿ ಖರೀಸಬಹುದಾಗಿದೆ. ಶಾಸಕರು ಅಕಾಡೆಮಿಯಿಂದ ಎಸ್‌ಕೆಎನ್‌ಜಿ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ ಪುಸ್ತಕ ಕೊಡಿಸಬೇಕು. ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ತರಬೇತಿ, ಎಐ ತರಬೇತಿ ಕಾಲಕಾಲಕ್ಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆಯಬೇಕು. ಕಲ್ಯಾಣ ಕರ್ನಾಟಕದ ಪತ್ರಕರ್ತರಿಗೆ ಶೀಘ್ರವೇ ಕೌಶಲ್ಯ ತರಬೇತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತದೆ. ಪತ್ರಿಕೋದ್ಯಮಕ್ಕೆ ಹೆಚ್ಚೆಚ್ಚು ಮಹಿಳೆಚಿiÀÄರು ಬರಬೇಕಿದ್ದು ಅಕಾಡೆಮಿಯಲ್ಲಿ ಪ್ರೋತ್ಸಾಹಕ ಯೋಜನೆಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಶಿವರಾಜ್ ಗುರಿಕಾರ, ಕಾಲೇಜು ಉಪಾಧ್ಯಕ್ಷ ವಿರೇಶ ಬಲ್ಕುಂದಿ, ಸದಸ್ಯ ಆಸೀಫ್ ಬಿಚ್ಚಗತ್ತಿ,ಬಿಜೆಪಿ ಮುಖಂಡ ಯಮನೂರ ಚೌಡ್ಕಿ, ಪ್ರಾಧ್ಯಾಪಕರಾದ ಮಂಜುನಾಥ, ಜೆ,ಕೃಷ್ಣ, ಪತ್ರಿಕೋದ್ಯಮ ವಿಭಾಗದ ಬಸವರಾಜ ಕರುಗಲ್, ಸತೀಶ, ಬಸವರಾಜ ಗಡಾದ್, ಶ್ರೀಕಾಂತ ಸೇರಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿದ್ದರು.

ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!! * ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ. *೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ.

ವಿಶ್ವಕಪ್ ಕ್ರಿಕೆಟ್ ಮ್ಯಾಚ್: ಮೂರನೇ ಭಾರಿಗೆ ಭಾರತದ ಮಡಿಲಿಗೆ ವಿಶ್ವ ಕಪ್.!!
* ಬ್ಯಾಟಿಂಗ್ ನಲ್ಲಿ ಅಭಿಷೇಕ್ ಶರ್ಮಾ, ಈಶನ್ ಕಿಶನ್ ೬ಓವರ್ ನಲ್ಲಿ ೯೩ ರನ್ ಗಳಿಕೆ.
*೧೫ಓವರ್ ಗಳಲ್ಲಿ ೨೦೩ ರನ್ ಗಳಿಕೆ
ಕಿಷ್ಕಿಂಧವಾಣಿ ಸುದ್ದಿ
ಅಹಮದಾಬಾದ್: 2026ರ ವಿಶ್ವಕಪ್ ಟಿ20 ಪಂದ್ಯಾವಳಿಯ ಫೈನಲ್ ಪಂದ್ಯ ಗುಜರಾತಿನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಜರುಗಿತು. ಗೆಲುವಿನ ಗುರಿಯೊಂದಿಗೆ ಭಾರತ ತಂಡದವರು ೫ ವಿಕೇಟ್‌ ಗಳ ನಷ್ಟಕ್ಕೆ 255 ರನ್ ಗಳ ಸವಾಲನ್ನು ನ್ಯೂಜಿಲೆಂಡ್ ತಂಡಕ್ಕೆ ಹಾಕಿದರು.
ಬ್ಯಾಟಿಂಗ್ ನಲ್ಲಿ ಹಿಂದೂ ಅಮೋಘ ಪ್ರದರ್ಶನವನ್ನು ನೀಡಿದ ಅಭಿಷೇಕ್ ಶರ್ಮ ಹಾಗೂ ಕಿಶನ್ ಕಿಶನ್ ಆರು ಓವರ್ ಗಳಲ್ಲಿ 92 ರನ್ ಗಳಿಸುವ ಮೂಲಕ ಭರ್ಜರಿ ಶುಭಾರಂಭ ಮಾಡಿದರು.ರನ್ ಗಳ ಗಳಿಕೆಯನ್ನು ಮುಂದುವರಿಸಿದವರು ಸಂಜು ಸ್ಯಾಮ್ಸನ್ ೪೬ ಎಸೆತಗಳ(ಬಾಲ್)ಲ್ಲಿ ೮೯ ರನ್ ಗಳಿಸುವ 15 ಓವರ್ ಗಳಲ್ಲಿ ಎರಡು ನೂರು ರನ್ನುಗಳ ಗಡಿಯನ್ನು ದಾಟಿಸಲಾಯಿತು.ನ್ಯೂಜಿಲೆಂಡ್ ನ ಜೇಮ್ಸ್ ನಿಶಾಮ್ ಒಂದು ಒವರ್ ನಲ್ಲಿ ಮೂರು ವಿಕೇಟ್‌ ಪಡೆದು ರನ್ ಗಳ ಗಳಿಕೆ ಪ್ರಮಾಣವನ್ನು ತಡೆದರು.ಶಿವಂ ದುಬೇ ೮ ಬಾಲ್ ನಲ್ಲಿ ೨೬ ರನ್ ಒಡೆಯುವ ಮೂಲಕ ರನ್ ಗಳಿಕೆ ಹೆಚ್ಚು ಮಾಡಿದತು.
ಭಾರತದ೨೫೫ ರನ್ ಗಳ ಗುರಿಯನ್ನು ಬೆನ್ನು ಹಟ್ಟಿದ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್ ಮ್ಯಾನ್ ಗಳು ಅಕ್ಷರ ಪಟೇಲ್ ಮತ್ತು ಜಶ್ಪ್ರೀತ್ ಬೂಮ್ರಾ ಬಾಲಿಂಗ್ ಮತ್ತು ಈಶನ್ ಕಿಶನ್ ಉತ್ತಮ ಪಿಲಿಂಡ್ ಗೆ ಭಾರತಕ್ಕೆ ಟಿ20 ವಿಶ್ವಕಪ್ ಬರಲು ಪ್ರಮುಖ ಕಾರಣವಾಯಿತು

ಹಿರೇಬೆಣಕಲ್ ಮೋರ್ಯರ ಬೆಟ್ಟದ ಶಿಲಾಸಮಾಧಿ ಸ್ಥಳ ಪ್ರವಾಸಿ ತಾಣವಾಗಿಸಲು ಯೋಜನೆ:ಡಾ.ಸುರೇಶ ಇಟ್ನಾಳ. *ಬೃಹತ್ ಶಿಲಾಯುಗದ ನೆಲೆ ಸಂರಕ್ಷಣೆಗೆ ಅಗತ್ಯ ಅನುದಾನ.

ಕಿಷ್ಕಿಂಧವಾಣಿ ಸುದ್ದಿ

ಗಂಗಾವತಿ:

ಹಿರೇಬೆಣಕಲ್ ನಲ್ಲಿ ಮೋರ್ಯರ ಬೆಟ್ಟದ ಪ್ರಾಚೀನ ಬೃಹತ್ ಶಿಲಾಯುಗದ (ಮೆಗಾಲಿಥಿಕ್) ನೆಲೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ್ ಬಿ. ಇಟ್ನಾಳ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಭಾನುವಾರ ಹಿರೇಬೆಣಕಲ್ ನಲ್ಲಿರುವ ಐತಿಹಾಸಿಕ ನೆಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ದರು. ಈ ತಾಣವನ್ನು ಪ್ರವಾಸಿಗರ ಮತ್ತು ಪರಿಸರ ಸ್ನೇಹಿಯಾಗಿ, ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ

“ನಾಡಿನ ಹೆಮ್ಮೆಯ ಈ ಬೃಹತ್ ಶಿಲಾಯುಗದ ನೆಲೆ ಕೊಪ್ಪಳ ಜಿಲ್ಲೆಯಲ್ಲಿರುವುದು ಹೆಮ್ಮೆಯ ಸಂಗತಿ. ಈ ತಾಣದ ಸಂರಕ್ಷಣೆಗೆ ನಾವು ಮೊದಲ ಆದ್ಯತೆ ನೀಡಿದ್ದೇವೆ. ಶಿಥಿಲಾವಸ್ಥೆಯಲ್ಲಿರುವ ಸ್ಮಾರಕಗಳ ರಕ್ಷಣೆ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಈಗಾಗಲೇ 80 ಲಕ್ಷ ರೂಪಾಯಿಗಳ ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಿಂದ ಹಿರೇಬೆಣಕಲ್ ನೆಲೆಯ ಕೆಳ ಭಾಗದವರೆಗೆ ಸುಗಮ ರಸ್ತೆ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸುವಂತೆ ಜಿಲ್ಲಾ ಅರಣ್ಯ ಅಧಿಕಾರಿ ನಿರ್ಮಲಾ ಅವರಿಗೆ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮುರಳಿಧರ, ಮಾರ್ಗದರ್ಶಕ ಮಂಜುನಾಥ ಗುಡ್ಲಾನೂರ, ದಂತ ವೈದ್ಯ ಶಿವಕುಮಾರ ಮಾಲಿಪಾಟೀಲ, ವೀರೇಶ ಅಂಗಡಿ, ಬಸನಗೌಡ ಹೊಸಹಳ್ಳಿ, ಮಂಜುನಾಥ ಡಿ, ಚಂದ್ರಶೇಖರ, ಹೆಚ್. ಭಾಷಾ,ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಉಪವಲಯ ಅರಣ್ಯ ಅಧಿಕಾರಿ ಉಮೇಶ್ವರ್, ಅರಣ್ಯಪಾಲಕ ಮಂಜುನಾಥ ನರೇರ, ಶಿವಕುಮಾರ ವಾಲಿ, ಶಿವಾನಂದ ತಳವಾರ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಮಾಜಿ ಸಚಿವ ಶ್ರೀರಂಗದೇವರಾಯಲು ಜಯಂತಿ ಆಚರಣೆ ನೀರಾವರಿ, ಶಿಕ್ಷಣ, ವಸತಿ ಮತ್ತು ಮೂಲಸೌಕರ್ಯಕ್ಕೆ ಶ್ರೀರಂಗದೇವರಾಯಲು ಕೊಡುಗೆ ಅಪಾರ *ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನಕ್ಕೆ ಪ್ರತಿಯೊಬ್ಬರ ಸಹಕಾರ ಇರುತ್ತದೆ *ಶಾಸಕ ಗಾಲಿ ಜನಾರ್ದನರೆಡ್ಡಿಯವರಿಂದ ಶ್ರೀರಂಗದೇವರಾಯಲು ಸರ್ಕಲ್ ಅಭಿವೃದ್ಧಿ ಭರವಸೆ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ಐದು ಭಾರಿ ಶಾಸಕರಾಗಿ ಸಚಿವರಾಗಿದ್ದ ಸರಳ, ಸಜ್ಜನರಾಜಕಾರಣಿ ರಾಜಾ ಶ್ರೀರಂಗದೇವರಾಯಲು ಅವರು ದೂರದೃಷ್ಠಿಯಿಂದ ಗಂಗಾವತಿ ಕ್ಷೇತ್ರದಲ್ಲಿ ನೀರಾವರಿ, ಶಿಕ್ಷಣ,ವಸತಿ ಸೇರಿ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಮಾಡಿದ್ದರು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ತಾಲೂಕಿನ ಆನೆಗೊಂದಿಯ ಶ್ರೀರಂಗದೇವರಾಯಲು ಸ್ಮಾರಕ ಸ್ಥಳದಲ್ಲಿ ಅವರ ಅಭಿಮಾನಿಗಳು ಹಾಗೂ ಕುಟುಂಬದವರು ಆಯೋಜಿಸಿದ್ದ ರಾಜಾ ಶ್ರೀರಂಗದೇವರಾಯಲು ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಂದಿನ ದಿನಗಳಲ್ಲಿ ರಾಜಾ ಶ್ರೀರಂಗದೇವರಾಯಲು ಅವರ ಹೆಸರಿನಲ್ಲಿ ರಚಿಸುವ ಪ್ರತಿಷ್ಠಾನಕ್ಕೆ ತಾವು ಸಂಪೂರ್ಣ ಸಹಕಾರ ನೀಡುವ ಜತೆಗೆ ಪ್ರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.ಹಂಪಿಯAತೆ ಆನೆಗೊಂದಿಯಲ್ಲೂ ಉತ್ಸವ ನಡೆದು ಇಲ್ಲಿಯ ಇತಿಹಾಸ, ಸ್ಮಾರಕಗಳ ಕುರಿತು ಇತರೆ ಭಾಗದ ಜನರಿಗೆ ಮನವರಿಕೆಯಾಗುವ ಕಾರ್ಯವಾಗಬೇಕೆಂದು ಶ್ರೀರಂಗದೇವರಾಯಲು ಅನೇಕ ಸಲ ಸಲಹೆ ನೀಡಿದ್ದರೆಂದರು.
ಜಿ.ಪಂ.ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಸ್ವಾಮಿ ಮಾತನಾಡಿ, ನನಗೆ ರಾಜಕೀಯ ಪಟ್ಟುಗಳನ್ನು ಜನರ ಸೇವೆಯ ಕುರಿತು ರಾಜಕೀಯ ಗುರುವಾಗಿ ಶ್ರೀರಂಗದೇವರಾಯಲು ಇದ್ದರು, ಅವರಂತೆ ನಾನು ಜನಸೇವೆ ಮಾಡಲು ಆರಂಭಿಸಿ ಆನೆಗೊಂದಿ ವ್ಯಾಪ್ತಿಚಿiÀÄ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಯಕ ಮಾಡಿದೆ ಎಂದರು.
ನ್ಯಾಯವಾದಿ ಎಚ್.ಸಿ.ಯಾದವ ಮಾತನಾಡಿ, ಜನಪರ ಕಾಳಜಿಯುಳ್ಳ ನಾಯಕ ಶ್ರೀರಂಗದೇವರಾಯಲು ಅವರಿಗೆ ನಾನು ರಾಜವಂಶಸ್ಥ ಎನ್ನುವ ಹಮ್ಮುಬಿಮ್ಮು ಇರಲಿಲ್ಲ, ಬಸ್ ನಿಲ್ದಾಣದ ಹತ್ತಿರ ಅವರ ಮನೆಗೆ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಬಸ್ ಇಲ್ಲ ಎಂದು ಹೋದರೆ ತಾವೇ ಅವರೊಂದಿಗೆ ಬಸ್ ಡಿಪೋ ಅಥವಾ ಬಸ್ ನಿಲ್ದಾಣಕ್ಕೆ ಆಗಮಿಸಿ ಗ್ರಾಮಗಳಿಗೆ ಬಸ್ ಬಿಡುವ ಮೂಲಕ ಜನರ ನಿಜವಾದ ಸೇವಕರಾಗಿದ್ದರು ಎಂದರು.
ಬಾಪಿರೆಡ್ಡಿ ಕ್ಯಾಂಪ್ ಟಿ.ವಿ.ಸತ್ಯನಾರಾಯಣ ಮಾತನಾಡಿ, ಹಿಟ್ನಾಳ ಮತ್ತು ಆನೆಗೊಂದಿ ಭಾಗದ ರೈತರು ಎಡದಂAಡೆ ಕಾಲುವೆಯ 11ಎ ವಿತರಣಾ ಕಾಲುವೆ ಪ್ರದೇಶದಲ್ಲಿ 11 ತಿಂಗಳು ನೀರಾವರಿ ಸೌಲಭ್ಯ ಪಡೆಯುತ್ತಿರುವುದು ಶ್ರೀರಂಗದೇವರಾಯಲು ಅವರ ಶ್ರಮದಿಂದಾಗಿ, ಬಸ್ ನಿಲ್ದಾಣ, ಸರ್ಕ್ಯೂಟ್ ಹೌಸ್, ದೇವಘಾಟದಿಂದ ಗಂಗಾವತಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ, ಸರಕಾರಿ ಮಹಾವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಕೃಷಿ ಸಂಶೋಧನಾ ಕೇಂದ್ರ, ಬಸ್ ಡಿಪೋ, ಒಳಚರಂಡಿ ಯೋಜನೆ ಅನುಷ್ಠಾನ ಮತ್ತು ಕೆರೆ ತುಂಬಿಸುವ ಯೋಜನೆ ಶ್ರೀರಂಗದೇವರಾಲು ಕಾಲದಲ್ಲಿ ಅನುಷ್ಠಾನವಾಗಿವೆ ಎಂದರು.
ರಾಜಾ ನರಸಿಂಹದೇವರಾಯಲು, ಎಚ್.ಹನುಮಂತಯ್ಯ, ಡಾ.ವಿ.ಎಸ್.ನ.ರಾಯಲು, ವಿಶ್ವನಾಥರಾಜು, ಕಡೆಬಾಗಿಲು ಪ್ರಸಾದ, ಸಾಣಾಪೂರ ವೆಂಕಟನಾರಾಯಣ, ಪತ್ರಕರ್ತ ಕೆ.ಮಲ್ಲಿಕಾರ್ಜುನ ಸಾಣಾಪೂರ ಮಾತನಾಡಿದರು.
ಕುಮಾರಿ ಬಿಂದು ಆನೆಗೊಂದಿಯವರು ಭರತ ನಾಟ್ಯದ ಮೂಲಕ ರಾಜಾ ಶ್ರೀರಂಗದೇವರಾಯಲು ಅವರು ಜಯಂತೋತ್ಸವಕ್ಕೆ ಎಲ್ಲರನ್ನು ಸ್ವಾಗತಿಸಿದ್ದು ಆಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಆದಿಶಕ್ತಿ ದೇವಾಲಯದ ಪೂಜ್ಯ ಬ್ರಹ್ಮಯ್ಯಸ್ವಾಮಿ, ಲಲಿತಾರಾಣಿ ಶ್ರೀರಂಗದೇವರಾಯಲು, ಕುಪ್ಪರಾಜು, ಕೃಷ್ಣದೇವರಾಯಲು,ಚಿತ್ರನಟ ವಿಷ್ಣುಜೋಶಿ ಆದಾಪೂರ,ನರಸಿಂಹಲು ಸಾಣಾಪೂರ, ಕೆ.ತಿರುಕಪ್ಪ, ಬಾಳೆಕಾಯಿ ತಿಮ್ಮಪ್ಪ, ಯುವರಾಜ, ಯೇಸಣ್ಣ, ಭತ್ತದ ಚಂದ್ರಶೇಖರ, ಪ್ರದೀಪ್, ಶಿವಚಿiÀÄ್ಯ, ಎ.ನಾಗಪ್ಪ, ಅಂಜನಾದೇವಿ, ಮೆಟ್ರಿ ಗುರಪ್ಪ, ರಾಮಕೃಷ್ಣಯ್ಯ ಇಲ್ಲೂರು,ರಾಮಕೃಷ್ಣಗೌಡ,ಎಂ.ವೆAಕಟೇಶ,ಬಾಲಯ್ಯ,ನಾಗಮುನಿರೆಡ್ಡಿ,ಲಕ್ಷಿö್ಮನಾರಾಯಣ,ರಜನೀಕಾAತ,ಅAಬಿಗೇರ ಅಂಜೀನಪ್ಪ ಸೇರಿ ಅನೇಕರಿದ್ದರು.
ಬಾಕ್ಸ್
ಶ್ರೀರಂಗದೇವರಾಯಲು ಅವರು ಕುಟುಂಬಕ್ಕಿAತಲೂ ಜನಸಾಮಾನ್ಯರ ಜತೆಗೆ ಅತೀ ಹೆಚ್ಚು ಕಾಲ ಕಲೇಯುತ್ತಿದ್ದರು. ರೈತರು, ಕೂಲಿಕಾರ್ಮಿಕರು, ಮಹಿಳೆಯರಿಗಾಗಿ ಅವರ ಅವಧಿಯಲ್ಲಿ ಹೆಚ್ಚು ಕೆಲಸಗಳಾಗಿದ್ದು ಜನ ಸಾಮಾನ್ಯರೇ ಸೇರಿಕೊಂಡು ರಾಜಾ ಶ್ರೀರಂಗದೇವರಾಯಲು ಪ್ರತಿಷ್ಠಾನ ರಚನೆ ಮಾಡಿ ಹಲವಾರು ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದು ಶ್ಲಾಘನೀಯವಾಗಿದೆ. ಈಗಾಗಲೇ ಆನೆಗೊಂದಿ ಕಡೆಬಾಗಿಲು ವೃತ್ತಕ್ಕೆ ರಾಜಾ ಶ್ರೀರಂಗದೇವರಾಯಲು ವೃತ್ತ ಎಂದು ನಾಮಕರಣ ಮಾಡಲಾಗಿದ್ದು ಶಾಸಕರಾದ ಗಾಲಿ ಜನಾರ್ದನರೆಡ್ಡಿಯವರು ಸರ್ಕಲ್ ಅಭಿವೃದ್ಧಿ ಕುರಿತು ನನ್ನ ಹತ್ತಿರ ಪ್ರಸ್ತಾಪ ಮಾಡಿದ್ದಾರೆ. ಲೋಕೋಪಯೋಗಿ ಇಲಾಖೆಯಡಿ ವಾಹನಗಳ ಸಂಚಾರಕ್ಕೆ ತೊಂದರೆಯಾಗದAತೆ ರಾಜಾ ಶ್ರೀರಂಗದೇವರಾಯಲು ಸರ್ಕಲ್ ನಿರ್ಮಾಣ ಮಾಡುವ ಯೋಜನೆ ಇದೆ.
-ಲಲಿತಾರಾಣಿ ಶ್ರೀರಂಗದೇವರಾಯಲು ರಾಜವಂಶಸ್ಥರು.
ಬಾಕ್ಸ್
ರಾಜಾ ಶ್ರೀರಂಗದೇವರಾಲು ಜಯಂತಿಯಲ್ಲಿ ವಿಶ್ವ ಮಹಿಳಾ ದಿನದ ನಿಮಿತ್ತ ಪರಿಸರ ಪ್ರೇಮಿ ಹಾಗೂ ನರ್ಸರಿಯ ಮೂಲಕ ಪರಿಸರ ಜಾಗೃತಿ ಮೂಡಿಸುವ ವಡ್ಡರಹಟ್ಟಿ ಗುಡ್ಡದ ಕ್ಯಾಂಪಿನ ಹುಲಿಗೆಮ್ಮ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಿ ನಗದು ಬಹುಮಾನ ನೀಡಲಾಯಿತು.

ಆನೆಗೊಂದಿ:ಸಾರ್ವಜನಿಕರಿಗೆ ತೊಂದರೆ ಕೊಡುವ ಅರಣ್ಯ ರಕ್ಷಕ ಲೋಕಾಯುಕ್ತ ದೂರು

ಕಿಷ್ಕಿಂಧವಾಣಿ ಸುದ್ದಿ

 ಗಂಗಾವತಿ: ಆನೆಗೊಂದಿ, ಸಾಣಾಪೂರ ಗ್ರಾ.ಪಂ.ಭಾಗದಲ್ಲಿ ಸಾರ್ವಜನಕರಿಗೆ ಮತ್ತು ರಸ್ತೆಗಳ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವವರಿಗೆ ಅರಣ್ಯ ಇಲಾಖೆಯ ರಕ್ಷಕ ಗುಂಡಪ್ಪ ಎನ್ನುವ ಅಧಿಕಾರಿ ಅಶ್ಲೀಲ ಪದಗಳಿಂದ ನಿಂದಿಸುವುದು ಸೇರಿ ದೈಹಿಕ ಹಲ್ಲೆಯಂತಹ ಕೃತ್ಯವೆಸಗುತ್ತಿದ್ದು ಈ ಕುರಿತು ಅರಣ್ಯ ಇಲಾಖೆಯ ವಲಯ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಂಗ್ಲಿ ರಂಗಾಪೂರ ಗ್ರಾಮದ ನಿವಾಸಿ ರಾಕೇಶ್ ಬಾಬು ಕಾಕರ‍್ಲಾ  ಒತ್ತಾಯಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಅರಣ್ಯ ರಕ್ಷಕ  ಗುಂಡಪ್ಪ ವಿರುದ್ಧ ನೀಡಿರುವ ದೂರಿನ ಪ್ರತಿ ಬಿಡುಗಡೆ ಮಾಡಿ ಮಾತನಾಡಿದರು.  ರಸ್ತೆ ಪಕ್ಕದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರಿಗೆ ತೊಂದರೆ ಕೊಡುತ್ತಿದ್ದಾರೆ.   ಮಾರ್ಚ್ 5 ರಂದು ಸಂಜೆ 5:39 ಕ್ಕೆ, ರಂಗಾಪುರ ಗ್ರಾಮದ ಮಿತಿಯೊಳಗೆ ಗುಂಡಪ್ಪ ಅವರು ನಡೆಸುತ್ತಿರುವ ಅಕ್ರಮವಾಗಿ ಮರಳು ಮತ್ತು ಮಣ್ಣು ಗಣಿಗಾರಿಕೆ ಮತ್ತು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಕಸ ವಿಲೇವಾರಿ, ಮತ್ತು ಅತೀ ಸೂಕ್ಷ್ಮ ವಲಯ ಎಂದು ನೀರಾವರಿ ಇಲಾಖೆಯವರು ಗುರುತಿಸಿರುವ  ತುಂಗಭದ್ರಾ  ಎಡದಂಡೆಯ ಕಾಲುವೆಯ ಒಡ್ಡನ್ನು ಅಗೆದು ಸಸಿ ನೆಡುವ  ಕುರಿತು ಕೊಪ್ಪಳದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ರಹಸ್ಯ ದೂರು ನೀಡಲಾಗಿದೆ.  . ಈ ದೂರುಗಳಿಗೆ ಬೆಂಬಲವಾಗಿ ಸ್ಥಳದ ನಕ್ಷೆ ಮತ್ತು ಛಾಯಾಚಿತ್ರದ ಪುರಾವೆಗಳನ್ನು ಒದಗಿಸಲಾಗಿದೆ. ಈ ವರದಿಯ ನಂತರ, ಅರಣ್ಯಪಾಲಕ ಗುಂಡಪ್ಪ (ಈ ವಿಭಾಗದ ಉಸ್ತುವಾರಿ ಅಧಿಕಾರಿ) ರಾತ್ರಿ 9:05 ಕ್ಕೆ ನನಗೆ ಮೊಬೈಲ್ ಕರೆಯ ಮೂಲಕ  ಸಂಪರ್ಕಿಸಿದರು. ಈ ಅನಧಿಕೃತ ಕರೆಯ ಸಮಯದಲ್ಲಿ, ಅಧಿಕಾರಿ ನನ್ನನ್ನು ಆಕ್ರಮಣಕಾರಿ ಮೌಖಿಕ ವಾದಗಳಿಗೆ ಮತ್ತು ಅವರ ವ್ಯಾಪ್ತಿಯಲ್ಲಿರುವ ಅಕ್ರಮ ಚಟುವಟಿಕೆಗಳನ್ನು ವರದಿ ಮಾಡಿದ್ದಕ್ಕಾಗಿ ನೇರ ಬೆದರಿಕೆ ಹಾಕಿದ್ದಾರೆ. . ಈ ಘಟನೆಯು ಎರಡು ಪ್ರಮುಖ ಕಾಳಜಿಗಳನ್ನು ಹುಟ್ಟುಹಾಕುತ್ತದೆ: ಗೌಪ್ಯತೆ ಉಲ್ಲಂಘನೆ: ದೂರುದಾರನಾಗಿ ನನ್ನ ಗುರುತನ್ನು ದೂರಿಗೆ ಒಳಗಾದ ವ್ಯಕ್ತಿಗೆ ಅನುಚಿತವಾಗಿ ಬಹಿರಂಗಪಡಿಸಲಾಗಿದೆ. ಬೆದರಿಕೆ: ಒಬ್ಬ ಸಾರ್ವಜನಿಕ ಸೇವಕ ಪರಿಸರ ಉಲ್ಲಂಘನೆಗಳನ್ನು ವರದಿ ಮಾಡಿದ ನಾಗರಿಕನಿಗೆ ಬೆದರಿಕೆ ಹಾಕಲು ತನ್ನ ಸ್ಥಾನಮಾನವನ್ನು ಬಳಸಿದ್ದಾನೆ. ನನ್ನ ಬಳಿ ಮಾಡಲಾದ ಬೆದರಿಕೆಗಳ ಆಡಿಯೋ ರೆಕಾರ್ಡಿಂಗ್ ಇದೆ. ಅರಣ್ಯಪಾಲಕ ಗುಂಡಪ್ಪ ಅವರ ನಡವಳಿಕೆಯ ಬಗ್ಗೆ ಔಪಚಾರಿಕ ವಿಚಾರಣೆ ಪ್ರಾರಂಭಿಸಲು ಮತ್ತು ನನ್ನ ಸುರಕ್ಷತೆ ಮತ್ತು ಅರಣ್ಯ ಇಲಾಖೆಯ ಜಾರಿ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಶಿಸ್ತು ಕ್ರಮ ಕೈಗೊಳ್ಳಬೇಕು. ನಾನು ಸಂಚಾರ ಮಾಡುವ ರಸ್ತೆಯಲ್ಲಿ ಅಡ್ಡ ಬಂದು ಪದೇ ಪದೇ ತೊಂದರೆ ಕೊಡುತ್ತಿದ್ದು  ಅರಣ್ಯ ಇಲಾಖೆಯ ಮೇಲಾಧಿಕಾರಿಗಳು, ಕೊಪ್ಪಳ ಎಸ್ಪಿಯವರು ಹಾಗೂ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಶೀಘ್ರ ಗುಂಡಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಿಬಿಎಸ್ ಗಂಜ್‌ನಲ್ಲಿ ಗೋಲ್‌ಮಾಲ್ ವ್ಯಾಪಾರಿಯಿಂದ ರೈತರಿಗೆ 13 ಕೋಟಿ ರೂ.ಗಳ ಪಂಗನಾಮ! *ರೈತರ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಹಣ ನೀಡದೇ ನಾಪತ್ತೆ *ವ್ಯಾಪಾರಿಯ ಮನೆ ಮುಂದೆ ರೈತರು, ವರ್ತಕರಿಂದ ಧರಣಿ

ಕಿಷ್ಕಿಂಧವಾಣಿ ಸುದ್ದಿ
ಗಂಗಾವತಿ: ನಗರದ ಶ್ರೀಚನ್ನಬಸವಸ್ವಾಮಿ ಗಂಜ್ ಪ್ರದೇಶದಲ್ಲಿ ಭತ್ತ ಖರೀದಿ ಮಾಡುವ ವ್ಯಾಪಾರಿಗಳಿಬ್ಬರು ರೈತರಿಂದ 40 ಸಾವಿರ ಕ್ವಿಂಟಲ್ ಭತ್ತ ಖರೀದಿಸಿ ಆರು ತಿಂಗಳು ಕಳೆದರೂ ಹಣ ಪಾವತಿಸದೇ ನಾಪತ್ತೆಯಾಗಿದ್ದು ಕೂಡಲೇ ಹಣ ಪಾವಸತಿಸುವಂತೆ ರೈತರು ಮತ್ತು ದಲಾಲಿ ವರ್ತಕರು ನಾಪತ್ತೆಯಾಗುರುವ ವ್ಯಾಪಾರಿಯ ಮನೆ ಮುಂದೆ ಧರಣಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವರ್ತಕರಾದ ಸಣ್ಣಕ್ಕಿ ನೀಲಪ್ಪ, ವಿನೋದ, ಜಿ.ಶೇಖರಪ್ಪ ಮಾತನಾಡಿ, ಸಂಜಯ್ ಸಿಂಡಿಕೇಟ್ ಮಾಲೀಕ ವಿರೇಶ ಕಲಿಕೇರಿ ಹಾಗೂ ರಾಹುಲ್ ಸಿಂಡಿಕೇಟ್ ಮಾಲೀಕರಾದ ಗಿರಿಜ ಕಲಿಕೇರಿ ಎನ್ನುವವರು ಸಿಬಿಎಸ್ ಗಂಜ್ ನಲ್ಲಿ ರೈತರು ಮತ್ತು ವರ್ತಕರಿಂದ 40 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಭತ್ತವನ್ನು ಖರೀದಿಸಿ ಸುಮಾರು 13 ಕೋಟಿ ರೂ.ಗಳಷ್ಟು ಹಣವನ್ನು ಕೊಡದೇ ರೈತರು ಮತ್ತು ವರ್ತಕರಿಗೆ ಸಂಕಷ್ಟ ಕೊಡುತ್ತಿದ್ದಾರೆ. ಕಳೆದ ನವೆಂಬರ್ ನಲ್ಲಿ ಭತ್ತ ಖರೀದಿ ಮಾಡಿದ್ದು ಪದೇ ಪದೇ ಸುಳ್ಳು ಹೇಳುತ್ತಾ ಕಾಲ ಕಳೆಯುತ್ತಿದ್ದಾರೆ. ಗಂಜ್ ವ್ಯಾಪಾರಿಗಳು ಸಭೆ ನಡೆಸಿ ಹಣ ಕೊಡುವಂತೆ ತಾಕೀತು ಮಾಡಿದಾಗ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಪೊಲೀಸ್ ಠಾಣೆಯಲ್ಲಿ ಶೇ.40 ರಷ್ಟು ಹಣ ಕೊಡುವ ಭರವಸೆ ನೀಡಿದ್ದು ಪುನಹ ಹಣ ಕೊಡದೇ ತಲೆ ಮರೆಸಿಕೊಂಡಿದ್ದಾರೆ. ಈ ಕುರಿತು ಎಪಿಎಂಸಿಯವರಿಗೆ  ರೈತರು ಹಾಗೂ ವರ್ತಕರು ದೂರು ನೀಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನು ರೀತಿ ರೈತರಿಗೆ ಮತ್ತು ವರ್ತಕರಿಗೆ ಹಣ ಕೊಡಿಸಬೇಕು. ಗಂಗಾವತಿ, ಕಂಪ್ಲಿ, ಕಾರಟಗಿ, ಸಿಂಧನೂರು, ಚನ್ನಳ್ಳಿ, ವಡ್ಡರಹಟ್ಟಿ, ಬಸಾಪಟ್ಟಣ, ಕನಕಗಿರಿ ಸೇರಿ ಸುತ್ತಲಿನ ಊರುಗಳ ರೈತರಿಂದ ಭತ್ತ ಖರೀದಿಸಿ ಮೋಸ ಮಾಡಲಾಗಿದ್ದು ಕೂಡಲೇ ಎಪಿಎಂಸಿ ಹಾಗೂ ಪೊಲೀಸರು ಮಧ್ಯೆ ಪ್ರವೇಶ ಮಾಡಿ ರೈತರು ಹಾಗೂ ವರ್ತಕರ ಹಣ ವಸೂಲಿ ಮಾಡಕೊಡಬೇಕು. ಇಲ್ಲವಾದಲ್ಲಿ ರೈತರು ಅನಾಹುತ ಮಾಡಿಕೊಳ್ಳುವ ಸಂಭವವಿದ್ದು ತಾಲೂಕು ಮತ್ತು ಜಿಲ್ಲಾಡಳಿತ ನೆರವಿಗೆ ಬರುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಣ್ಣಕ್ಕಿ ನೀಲಪ್ಪ, ಜಿ.ಶೇಖರಪ್ಪ, ವಿನೋದ್, ಅಮರೇಶಪ್ಪ, ಸಿದ್ದಪ್ಪ, ಶಿವಯೋಗಿ, ನಾಗರಾಜ, ಜಂಬಣ್ಣ, ತ್ರಿಮೂರ್ತಿ, ಶಿವಶಂಕರ, ಶ್ರೀಕಾಂತ ಆರಹಾಳ, ಗಿರಿಶ, ರಾಜಪ್ಪ.ಬಸವರಾಜ, ಹೊನ್ನಪ್ಪ, ಚಂದ್ರು ಲಮಾಣಿ, ಸುರೇಶ, ಪಂಪನಗೌಡ, ವಿರೂಪಾಕ್ಷಪ್ಪ, ಶಿವು, ರುದ್ರೇಶ, ಸೋಮನಾಥ ಸೇರಿ ನೂರಕ್ಕೂ ಹೆಚ್ಚು ರೈತರು, ವರ್ತಕರಿದ್ದರು. *** ಸಂಜಯ್ ಹಾಗೂ ರಾಹುಲ್ ಸಿಂಡಿಕೇಟ್ ಹೆಸರಿನಲ್ಲಿ ಭತ್ತ ಖರೀದಿಸಿ ರೈತರು ಮತ್ತು ವರ್ತಕರಿಗೆ ಹಣ ಪಾವತಿಸದೇ ಇರುವುದು ಗಮನಕ್ಕೆ ಬಂದಿದೆ. ಈ ಕುರಿತು  ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ವಿರೇಶ ಕಲಿಕೇರಿ ಇವರ ಹೆಸರಿನಲ್ಲಿ ನಿವೇಶನ ಎಪಿಎಂಸಿ ಯಾರ್ಡಿನಲ್ಲಿದೆ. ಜತೆಗೆ ಅವರ ಹೆಸರಿನಲ್ಲಿ ಕೆ.ಟಿ.ನಂಬರ್ ನ್ನು ಬ್ಲಾಕ್ ಮಾಡಲಾಗಿದೆ. ಒಂದು ಭಾರಿ ಸಚಿಧಾನವೂ ಮಾಡಲಾಗಿದ್ದು ಹಣ ಪಾವತಿ ಮಾಡುವುದಾಗಿ ಹೇಳಿ ನಾಪತ್ತೆಯಾಗಿರುವ ಕುರಿತು ಮಾಹಿತಿ ಇದೆ. ಈ ಎಲ್ಲಾ ವಿಷಯವನ್ನು ಕೇಂದ್ರ ಕಚೇರಿಗೆ ವರದಿ ಮಾಡಲಾಗಿದೆ. ಪುನಹ ರೈತರು ಮತ್ತು ವರ್ತಕರ ಹಣ ಕೊಡಿಸಲು ಕಾನೂನು ರೀತಿ ಯತ್ನಿಸಲಾಗುತ್ತದೆ. -ಯಮನಪ್ಪ ಎಪಿಎಂಸಿ ಕಾರ್ಯದರ್ಶಿಗಳು.